ಕಳೆದ ಐದು ದಿನಗಳಿಂದ ತಾಲ್ಲೂಕಿನ ಬಿಕ್ಕೋಡು, ಅರೇಹಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಎರಡು ಪ್ರತೇಕ ಕಾಡಾನೆಗಳ ಹಿಂಡು ಸಂಚರಿಸುತ್ತಿದೆ. 20 ಆನೆಗಳಿರುವ ಹಿಂಡು ಚಿಕ್ಕಮಗಳೂರು ವಲಯ ತಲುಪಿದೆ. ಆದರೆ, ಆರು ಆನೆಗಳಿರುವ ಹಿಂಡು ಕೋಗಿಲಮನೆ, ಹಿರೀಕೊಲೆ, ಬಿಟ್ರವಳ್ಳಿ, ಪ್ರಸಾದಿಹಳ್ಳಿ, ಸನ್ಯಾಸಿಹಳ್ಳಿ, ಮಲ್ಲಾಪುರ ಗ್ರಾಮಗಳಲ್ಲಿ ಸಂಚರಿಸಿದ್ದು, ಗುರುವಾರ ಬೇಲೂರು ಚಿಕ್ಕಳ್ಳದ ಆಸುಪಾಸಿನಲ್ಲಿ ಬೀಡುಬಿಟ್ಟಿತ್ತು. ಈ ಭಾಗದ ಜೋಳ, ಭತ್ತ, ತೆಂಗು ಬೆಳೆಗಳನ್ನು ನಾಶಪಡಿಸಿವೆ.