ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಸರ್ಕಾರ ಚುನಾವಣೆಗೆ ಆದ್ಯತೆ ನೀಡಿದ ಕಾರಣ ಕೋವಿಡ್ ಎರಡನೇ ಅಲೆಯಲ್ಲಿ ಸಾವು, ನೋವು ಹೆಚ್ಚು ಸಂಭವಿಸಿದೆ. ಮರಣ ಸಂಖ್ಯೆ ನಿಖರವಾಗಿ ನೀಡುತ್ತಿಲ್ಲ. ಉದಾಹರಣೆಗೆ ಜಿಲ್ಲೆಯಲ್ಲಿ ಬುಧವಾರ 11 ಜನರು ಮೃತಪಟ್ಟಿದರೆ, ಜಿಲ್ಲಾಡಳಿತ 8 ಮಂದಿ ಸಾವು ಪ್ರಕಟಿಸಿದೆ. ಸಕಲೇಶಪುರ ಪಿಡಿಒ ಮೃತಪಟ್ಟರೂ ಪರಿಹಾರ ನೀಡಿಲ್ಲ. ಶುಕ್ರವಾರ ಜಿಲ್ಲೆಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಎಂದು ವಿವರಿಸಿದರು.