‘ನನ್ನ ಅಂಗಾಂಗ ದಾನ ಮಾಡಿ, ಅಂತ್ಯಕ್ರಿಯೆ ವೇಳೆ ಸಿ.ಎಂ, ಶಿಕ್ಷಣ ಸಚಿವ, ಆದಿಚುಂಚನಗಿರಿ ಶ್ರೀಗಳು ಇರಬೇಕು. ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆಯುವುದು ಜೀವದ ಆಸೆಯಾಗಿತ್ತು. ನನ್ನ ಸಾವಿನ ಬಳಿಕ ತಂದೆ– ತಾಯಿ, ಇಬ್ಬರು ಅನಾಥ ಮಕ್ಕಳನ್ನು ದತ್ತು ಪಡೆದು ಸಾಕಬೇಕು. ಆ ಇಬ್ಬರಲ್ಲಿನಾನು ಇರುತ್ತೇನೆ’ ಎಂದು 13 ನಿಮಿಷ 21 ಸೆಕೆಂಡ್ ವಿಡಿಯೋದಲ್ಲಿ ತನ್ನ ಬಾಲ್ಯ, ವಿದ್ಯಾಭ್ಯಾಸ, ಸ್ನೇಹಿತರು, ಉಪನ್ಯಾಸಕರ ಬಗ್ಗೆ ಮಾತನಾಡಿದ್ದಾನೆ.