ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

Published : 18 ಮೇ 2024, 5:23 IST
Last Updated : 18 ಮೇ 2024, 5:23 IST
ಫಾಲೋ ಮಾಡಿ
Comments
ರಂಗಸ್ವಾಮಿ
ರಂಗಸ್ವಾಮಿ
ಹಳೇಬೀಡು ಈಗ ವಿಶ್ವ ಮನ್ನಣೆ ಪಡೆದಿರುವುದರಿಂದ ಸ್ಥಳೀಯವಾಗಿಯೂ ಸೌಲಭ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸುಗಮ ವಾಹನ ನಿಲುಗಡೆ ಸ್ವಚ್ಛತೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ.
ರಂಗಸ್ವಾಮಿ ಹಳೇಬೀಡು ನಿವಾಸಿ
ಎಸ್.ಸಿ. ವಿರೂಪಾಕ್ಷ
ಎಸ್.ಸಿ. ವಿರೂಪಾಕ್ಷ
ಗೂಡಂಗಡಿ ತೆರವು ಮಾಡುವಂತೆ ಹಲವು ಬಾರಿ ಮೌಖಿಕವಾಗಿ ಹೇಳವಾಗಿತ್ತು. ಈ ಕುರಿತು ದೇವಾಲಯ ಬಳಿಯ ವರ್ತಕರು ಸ್ಪಂದನೆ ನೀಡಿರಲಿಲ್ಲ. ಜಿಲ್ಲಾಧಿಕಾರಿ ಆದೇಶದ ನಂತರ ಕಠಿಣ ಕ್ರಮ ಕೈಗೊಂಡೆವು
ಎಸ್.ಸಿ.ವಿರೂಪಾಕ್ಷ ಹಳೇಬೀಡು ಪಿಡಿಒ
ಜಿಲ್ಲಾಧಿಕಾರಿ ಆದೇಶ ಪಾಲನೆ
ಏಪ್ರಿಲ್‌ನಲ್ಲಿ ಜಿಲ್ಲಾದಿಕಾರಿ ಸಿ.ಸತ್ಯಭಾಮಾ ಹೊಯ್ಸಳೇಶ್ವರ ದೇವಾಲಯಕ್ಕೆ ಬಂದಿದ್ದು ಪ್ರವೇಶ ದ್ವಾರದಲ್ಲಿ ಗೂಡಂಗಡಿ ವ್ಯಾಪಿಸಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಹನ ಪಾರ್ಕಿಂಗ್ ಸ್ಥಳದಲ್ಲಿಯೂ ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿದ್ದರು. ಈ ಕುರಿತು ಹಳೇಬೀಡು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗೂಡಂಗಡಿ ವ್ಯಾಪಿಸಿ ಸ್ವಚ್ಛತೆ ಇಲ್ಲದಂತೆ ಕಾಣುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಿದ್ದರು. ಪಿಡಿಒ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ವಚ್ಛತೆಯ ಕ್ರಮ ಕೈಗೊಂಡರು. ಪಾರ್ಕಿಂಗ್ ಜಾಗದ ಸುತ್ತ ಈಗ ಕಬ್ಬಿಣದಿಂದ ಬೇಲಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT