ಹಳೇಬೀಡು ಈಗ ವಿಶ್ವ ಮನ್ನಣೆ ಪಡೆದಿರುವುದರಿಂದ ಸ್ಥಳೀಯವಾಗಿಯೂ ಸೌಲಭ್ಯ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸುಗಮ ವಾಹನ ನಿಲುಗಡೆ ಸ್ವಚ್ಛತೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ.
ರಂಗಸ್ವಾಮಿ ಹಳೇಬೀಡು ನಿವಾಸಿ
ಎಸ್.ಸಿ. ವಿರೂಪಾಕ್ಷ
ಗೂಡಂಗಡಿ ತೆರವು ಮಾಡುವಂತೆ ಹಲವು ಬಾರಿ ಮೌಖಿಕವಾಗಿ ಹೇಳವಾಗಿತ್ತು. ಈ ಕುರಿತು ದೇವಾಲಯ ಬಳಿಯ ವರ್ತಕರು ಸ್ಪಂದನೆ ನೀಡಿರಲಿಲ್ಲ. ಜಿಲ್ಲಾಧಿಕಾರಿ ಆದೇಶದ ನಂತರ ಕಠಿಣ ಕ್ರಮ ಕೈಗೊಂಡೆವು
ಎಸ್.ಸಿ.ವಿರೂಪಾಕ್ಷ ಹಳೇಬೀಡು ಪಿಡಿಒ
ಜಿಲ್ಲಾಧಿಕಾರಿ ಆದೇಶ ಪಾಲನೆ
ಏಪ್ರಿಲ್ನಲ್ಲಿ ಜಿಲ್ಲಾದಿಕಾರಿ ಸಿ.ಸತ್ಯಭಾಮಾ ಹೊಯ್ಸಳೇಶ್ವರ ದೇವಾಲಯಕ್ಕೆ ಬಂದಿದ್ದು ಪ್ರವೇಶ ದ್ವಾರದಲ್ಲಿ ಗೂಡಂಗಡಿ ವ್ಯಾಪಿಸಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಹನ ಪಾರ್ಕಿಂಗ್ ಸ್ಥಳದಲ್ಲಿಯೂ ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿರುವುದನ್ನು ಗಮನಿಸಿದ್ದರು. ಈ ಕುರಿತು ಹಳೇಬೀಡು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಗೂಡಂಗಡಿ ವ್ಯಾಪಿಸಿ ಸ್ವಚ್ಛತೆ ಇಲ್ಲದಂತೆ ಕಾಣುತ್ತಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶ ಮಾಡಿದ್ದರು. ಪಿಡಿಒ ಹಾಗೂ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ವಚ್ಛತೆಯ ಕ್ರಮ ಕೈಗೊಂಡರು. ಪಾರ್ಕಿಂಗ್ ಜಾಗದ ಸುತ್ತ ಈಗ ಕಬ್ಬಿಣದಿಂದ ಬೇಲಿ ಮಾಡಲಾಗಿದೆ.