11ನೇ ಕೆಎಸ್ಆರ್ಪಿ ಘಟಕದ ವೇತನ ಶಾಖೆಯಲ್ಲಿ 2015–2016 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರಾದ ವೈ.ಕೆ.ಯೋಗೀಶ್, ಲತಾಮಣಿ, ಕಂಪ್ಯೂಟರ್ ಸಹಾಯಕ ವೈ.ಎಚ್.ಮನು, ವೈ.ಸತ್ಯಪ್ರಕಾಶ್, ಶಾಖಾ ಅಧೀಕ್ಷಕ ಚಂದ್ರು (ಪ್ರಸ್ತುತ ಸಹಾಯಕ ಆಡಳಿತಾಧಿಕಾರಿ ಡಿಪಿಒ) ಕಮಾಂಡೆಂಟ್ ಕೃಷ್ಣಪ್ಪ ಹಾಗೂ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಮಾದೇಗೌಡ ಅವರು ಕಚೇರಿಯಲ್ಲಿನ ಸಿಬ್ಬಂದಿ, ಪೊಲೀಸರ ಉಳಿತಾಯ ಹಾಗೂ ಭತ್ಯೆಯ ಹಣವನ್ನು ಸರಿಯಾಗಿ ಅವರ ಖಾತೆಗಳಿಗೆ ಸಂದಾಯ ಮಾಡಿಲ್ಲ. ದಾಖಲೆ ತಿದ್ದಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ದೂರು ನೀಡಲಾಗಿದೆ.