ಅವಿನಾಶ್ ಗೆರ್ಲಾಡ್ ಅವರು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ತಮ್ಮ ಊರಾದ ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ದಾಸಪುರಕ್ಕೆ ಹೋಗಿದ್ದರು. ಸ್ನೇಹಿತರಾದ ಗಣೇಶ್ ಎಂಬುವವರು ಗೃಹಪ್ರವೇಶದ ಆಮಂತ್ರಣ ಪತ್ರಿಕೆ ಕೊಡಲು ಅವಿನಾಶ್ ಅವರ ಮನೆಗೆ ಬಂದಿದ್ದು, ಮನೆಗೆ ಬಾಗಿಲು ಒಡೆದಿರುವುದನ್ನು ನೋಡಿದ್ದಾರೆ. ಕೂಡಲೇ ಕರೆ ಮಾಡಿ, ಅವಿನಾಶ್ ಅವರಿಗೆ ವಿಷಯ ತಿಳಿಸಿದ್ದಾರೆ.