<p><strong>ಹಳೇಬೀಡು: ‘</strong>ಸಾಹಿತ್ಯದ ಮೂಲ ಬೇರು ಜನಪದದಲ್ಲಿ ಅಡಗಿದೆ. ಬಾಯಿಂದ ಬಾಯಿಗೆ ವರ್ಗಾವಣೆ ಹೊಂದಿದ ಅಕ್ಷರದ ಸಾಲುಗಳು ಕಾಲಕ್ರಮೇಣ ಲಿಖಿತರೂಪ ಪಡೆದು ಅತ್ಯುತ್ತಮ ಸಾಹಿತ್ಯವಾಗಿ ಹೊರಹೊಮ್ಮಿವೆ’ ಎಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಉಮೇಶ್ ಹೊಸಹಳ್ಳಿ ಹೇಳಿದರು.</p>.<p>ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸಾ ಕೋಶ ಹಾಗೂ ಕನ್ನಡ ವಿಭಾಗದ ಆಶ್ರಮದಲ್ಲಿ ನಡೆದ ಸಾಹಿತ್ಯ ಮತ್ತು ಯುವ ಜನತೆ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಆರಂಭದಲ್ಲಿ ಅನಕ್ಷರಸ್ಥರಿಂದ ಹುಟ್ಟಿದೆ. ನಂತರ ಸಾಹಿತ್ಯ ವಿದ್ಯಾವಂತರಿಗೆ ಜ್ಜಾನಾರ್ಜನೆ ನೀಡುವ ಶಕ್ತಿಯಾಗಿ ಹೊರ ಹೊಮ್ಮಿದೆ. ಸಾಹಿತ್ಯ ಯುವ ಜನರಿಗೆ ವೈಚಾರಿಕತೆ, ತಾರ್ಕಿಕ ತಲೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ಉಮೇಶ್ ಹೇಳಿದರು.</p>.<p>ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ‘ಸಾಹಿತ್ಯದ ಜ್ಞಾನ ಸಂಪಾದಿಸಿದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಇಂದಿನ ಯುವ ಜನತೆ ಸಾಹಿತ್ಯದ ಅಧ್ಯಯನಕ್ಕೆ ಮಹತ್ವ ನೀಡಬೇಕಾಗಿದೆ. ಯುವ ಜನತೆ ಉತ್ತಮ ಸಾಹಿತ್ಯ ಅಧ್ಯಯನ ಮಾಡುವುದರೊಂದಿಗೆ ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕಾಗಿದೆ’ ಎಂದರು.</p>.<p>ಕನ್ನಡ ವಿಭಾಗ ಮುಖ್ಯಸ್ಥ ತಿಮ್ಮನಾಯಕ ಮಾತನಾಡಿ, ‘ಸಾಹಿತ್ಯ ಎಂದರೆ ಕೇವಲ ಭಾಷೆಗೆ ಸಂಬಂಧಿಸಿದಂತೆ ಎಂದು ತಿಳಿಯಬಾರದು. ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳಿವೆ. ವಿವಿಧ ವಿಷಯಗಳ ಅಧ್ಯಯನಕ್ಕೆ ಸಾಹಿತ್ಯ ಸಹಕಾರಿಯಾಗುತ್ತದೆ’ ಎಂದರು.</p>.<p>ಐಕ್ಯೂಎಸಿ ಸಂಚಾಲಕ ಡಾ.ಅಭಿಷೇಕ್.ಎನ್, ಹಿರಿಯ ಶ್ರೇಣಿ ಗ್ರಂಥಪಾಲಕ ಡಾ.ಮನೋಜ್ ಕುಮಾರ್, ಪ್ರಾಧ್ಯಾಪಕರಾದ ರಾಘವೇಂದ್ರ ಕೆ.ಸಿ, ಶಂಕರಪ್ಪ ಎಸ್.ಆರ್, ಚಂದ್ರಶೇಖರ ಸಿಂಗ್, ರೇಷ್ಮಾಭಾನು, ಪ್ರಥಮ ದರ್ಜೆ ಸಹಾಯಕ ಉಮೇಶ್.ಎಲ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು: ‘</strong>ಸಾಹಿತ್ಯದ ಮೂಲ ಬೇರು ಜನಪದದಲ್ಲಿ ಅಡಗಿದೆ. ಬಾಯಿಂದ ಬಾಯಿಗೆ ವರ್ಗಾವಣೆ ಹೊಂದಿದ ಅಕ್ಷರದ ಸಾಲುಗಳು ಕಾಲಕ್ರಮೇಣ ಲಿಖಿತರೂಪ ಪಡೆದು ಅತ್ಯುತ್ತಮ ಸಾಹಿತ್ಯವಾಗಿ ಹೊರಹೊಮ್ಮಿವೆ’ ಎಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಉಮೇಶ್ ಹೊಸಹಳ್ಳಿ ಹೇಳಿದರು.</p>.<p>ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸಾ ಕೋಶ ಹಾಗೂ ಕನ್ನಡ ವಿಭಾಗದ ಆಶ್ರಮದಲ್ಲಿ ನಡೆದ ಸಾಹಿತ್ಯ ಮತ್ತು ಯುವ ಜನತೆ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತ್ಯ ಆರಂಭದಲ್ಲಿ ಅನಕ್ಷರಸ್ಥರಿಂದ ಹುಟ್ಟಿದೆ. ನಂತರ ಸಾಹಿತ್ಯ ವಿದ್ಯಾವಂತರಿಗೆ ಜ್ಜಾನಾರ್ಜನೆ ನೀಡುವ ಶಕ್ತಿಯಾಗಿ ಹೊರ ಹೊಮ್ಮಿದೆ. ಸಾಹಿತ್ಯ ಯುವ ಜನರಿಗೆ ವೈಚಾರಿಕತೆ, ತಾರ್ಕಿಕ ತಲೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ಉಮೇಶ್ ಹೇಳಿದರು.</p>.<p>ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ‘ಸಾಹಿತ್ಯದ ಜ್ಞಾನ ಸಂಪಾದಿಸಿದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಇಂದಿನ ಯುವ ಜನತೆ ಸಾಹಿತ್ಯದ ಅಧ್ಯಯನಕ್ಕೆ ಮಹತ್ವ ನೀಡಬೇಕಾಗಿದೆ. ಯುವ ಜನತೆ ಉತ್ತಮ ಸಾಹಿತ್ಯ ಅಧ್ಯಯನ ಮಾಡುವುದರೊಂದಿಗೆ ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕಾಗಿದೆ’ ಎಂದರು.</p>.<p>ಕನ್ನಡ ವಿಭಾಗ ಮುಖ್ಯಸ್ಥ ತಿಮ್ಮನಾಯಕ ಮಾತನಾಡಿ, ‘ಸಾಹಿತ್ಯ ಎಂದರೆ ಕೇವಲ ಭಾಷೆಗೆ ಸಂಬಂಧಿಸಿದಂತೆ ಎಂದು ತಿಳಿಯಬಾರದು. ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳಿವೆ. ವಿವಿಧ ವಿಷಯಗಳ ಅಧ್ಯಯನಕ್ಕೆ ಸಾಹಿತ್ಯ ಸಹಕಾರಿಯಾಗುತ್ತದೆ’ ಎಂದರು.</p>.<p>ಐಕ್ಯೂಎಸಿ ಸಂಚಾಲಕ ಡಾ.ಅಭಿಷೇಕ್.ಎನ್, ಹಿರಿಯ ಶ್ರೇಣಿ ಗ್ರಂಥಪಾಲಕ ಡಾ.ಮನೋಜ್ ಕುಮಾರ್, ಪ್ರಾಧ್ಯಾಪಕರಾದ ರಾಘವೇಂದ್ರ ಕೆ.ಸಿ, ಶಂಕರಪ್ಪ ಎಸ್.ಆರ್, ಚಂದ್ರಶೇಖರ ಸಿಂಗ್, ರೇಷ್ಮಾಭಾನು, ಪ್ರಥಮ ದರ್ಜೆ ಸಹಾಯಕ ಉಮೇಶ್.ಎಲ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>