‘ದೇವೇಗೌಡರು ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯರ ಬಗ್ಗೆಯೇ ಯೋಚನೆ ಮಾಡುವುದಾದರೆ, ಬೇರೆ ಪಕ್ಷದ ನಾಯಕರು ಏನು ಮಾಡಬೇಕು?. ಕೆಲಸ ಮಾಡಿ ಟಿಕೆಟ್ ಕೇಳಿದ್ದರೆ ಒಪ್ಪಬಹುದು. ಹಾಸನ ಜಿಲ್ಲೆಯ ಬಗ್ಗೆ ಅರಿಯದ ಪ್ರಜ್ವಲ್ಗೆ ಟಿಕೆಟ್ ನೀಡಿದರೆ ಬೆಂಬಲ ನೀಡುವುದಿಲ್ಲ.ಈಗಲೂ ಕಾಲ ಮಿಂಚಿಲ್ಲ. ದೇವೇಗೌಡರ ಕುಟುಂಬ ಮನಸ್ಸು ಬದಲಾಯಿಸಿದರೆ ಉತ್ತಮ. ಗೌಡರು ಅಭ್ಯರ್ಥಿಯಾಗದಿದ್ದರೆ ಸಮ್ಮಿಶ್ರ ಸರ್ಕಾರದ ಪರವಾಗಿ ಕೆಲಸ ಮಾಡುವುದಿಲ್ಲ. ಮೊದಲಿನಿಂದಲೂ ಗೌಡರ ಕುಟುಂಬದ ರಾಜಕೀಯದ ವಿರುದ್ಧ ಇದ್ದೇನೆ’ ಎಂದು ವಾಗ್ದಾಳಿ ನಡೆಸಿದರು.