ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ ಮಾತನಾಡಿ, ‘ಹಾಸನ ಸಿಡಿಪಿಒ ಆಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಜಯಕಿರಣ ಅವರು ಕಚೇರಿಯನ್ನು ಖಾಸಗಿ ಸ್ವತ್ತು ಎಂಬಂತೆ ಪರಿಗಣಿಸಿದ್ದಾರೆ. ಅಂಗನವಾಡಿ ನೌಕರರ ಕುಂದುಕೊರತೆ ಸಭೆ ನಡೆಸಿಲ್ಲ. ಅಂಗನವಾಡಿಗಳ ತಪಾಸಣೆಯನ್ನು ಅವರ ತಂದೆ, ತಾಯಿ ಹಾಗೂ ಸಹೋದರ ನಡೆಸುತ್ತಾರೆ. ಮೊಟ್ಟೆ, ತರಕಾರಿ ಖರೀದಿಗೆ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡುವುದಿಲ್ಲ. ತಾಲ್ಲೂಕಿನ ಯಾವ ಅಂಗನವಾಡಿ ನೌಕರರೊಂದಿಗೂ ಸೌಹಾರ್ದತೆ ಹೊಂದಿಲ್ಲ’ ಎಂದು ಆರೋಪಿಸಿದರು.