ಹಾಸನ: ‘ಜೆಡಿಎಸ್ ಬಗ್ಗೆ ನಿಷ್ಠೆ ಇದ್ದರೆ ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷದಲ್ಲೇ ಇರಲಿ. ಹೊರ ಹೋಗುವುದಾದರೆ ಹೋಗಲಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಭಾನುವಾರ ಇಲ್ಲಿ ಹೇಳಿದರು.
‘ಜಿ.ಟಿ.ದೇವೇಗೌಡ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿದ್ದು, ಹಿರಿಯರು ಎಂಬ ಕಾರಣಕ್ಕೆ ಪಕ್ಷ ಇದುವರೆಗೆ ಸಹಿಸಿಕೊಂಡಿದೆ. ದೇಹ ಇಲ್ಲಿ ಮನಸ್ಸು ಇನ್ನೆಲ್ಲೋ ಬೇಡ. ಗೊಂದಲದ ಹೇಳಿಕೆ ನೀಡುತ್ತ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಡ’ ಎಂದರು.
ಪಕ್ಷ ಸಂಘಟನೆಗೆ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ಕರೆಸುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಇದುವರೆಗೆ ಭೇಟಿ ಮಾಡಿಲ್ಲ ಎಂದು ನುಡಿದರು.