ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ:‌‌ ಭಾರಿ ಮಳೆ, ಶ್ರವಣಬೆಳಗೊಳ‌‌ ವಿಂಧ್ಯಗಿರಿಯಲ್ಲಿ‌‌ ಕಲ್ಲು‌ ಕುಸಿತ

Last Updated 3 ಆಗಸ್ಟ್ 2022, 3:59 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ‌‌ ಮಂಗಳವಾರ‌ ರಾತ್ರಿ ಧಾರಾಕಾರ‌ ಮಳೆ ಮುಂದುವರಿದಿದೆ.

ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಕೋಟೆಯ ಕಲ್ಲುಗಳು ಮಳೆಯಿಂದಾಗಿ ಸಡಿಲಗೊಂಡು ಬಿದ್ದಿವೆ. ಕೆಲವು ಕಲ್ಲುಗಳು ಮೆಟ್ಟಿಲ‌ಕೆಳಗೆ ಬಿದ್ದಿದ್ದು,‌ಯಾವುದೇ ಅನಾಹುತ ಆಗಿಲ್ಲ.‌‌ ಸದ್ಯಕ್ಕೆ‌‌ ದೇವಾಲಯ ಪ್ರವೇಶ‌ ನಿರ್ಬಂಧಿಸಲಾಗಿದೆ.

ಶ್ರವಣಬೆಳಗೊಳದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಒಳಚರಂಡಿ ತುಂಬಿ ರಸ್ತೆಗಳು ಹಳ್ಳದಂತಾಗಿದ್ದವು. ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಜನತೆ ಆತಂಕದಲ್ಲಿದ್ದಾರೆ.

ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲೂ‌ ಧಾರಾಕಾರ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT