ರಥೋತ್ಸವಕ್ಕೆ ಬರುವವರಿಗೆ ಮನರಂಜನೆ ನೀಡಲು ಬಯಲುರಂಗ ಮಂದಿರದ ಆವರಣದಲ್ಲಿ ಮನರಂಜನೆ ಪಾರ್ಕ್ ಸಿದ್ಧಗೊಂಡಿದೆ.
ತಾತನ ಜೊತೆಯಲ್ಲಿ ಜಾತ್ರೆ ನೋಡಲು ಬರುತ್ತಿದ್ದೆ. ನಮ್ಮೂರಿನ ಜಾತ್ರೆ ವೈಭವ ಉಳಿಸಿಕೊಂಡು ಬಂದಿದೆ. ಹಿಂದೆ ದನಗಳ ಜಾತ್ರೆಯೂ ನಡೆಯುತ್ತಿತ್ತು. ಈ ದನಗಳ ಜಾತ್ರೆ ನಡೆಯದಿರುವುದು ಬೇಸರದ ಸಂಗತಿ
ಎನ್.ಜಿ.ಮುಕುಂದ ವೆಂಕಟೇಶ ಮೆಡಿಕಲ್ ಸ್ಟೋರ್ ಮಾಲೀಕ
ಜಾತ್ರೆ ಅಂದರೆ ನಮಗೆ ಶ್ರದ್ದೆ. ಜಾತ್ರೆಯ ದಿನ ಲಕ್ಷ್ಮೀನರಸಿಂಹನ ದರ್ಶನ ಮಾಡಿ ರಥ ಎಳೆಯದಿದ್ದರೆ ನಮಗೆ ಸಮಾದಾನವೇ ಇರುವುದಿಲ್ಲ. ಆದಿನ ರಥ ಎಳೆಯುವುದಕ್ಕೇ ನನ್ನ ಮೊದಲ ಆದ್ಯತೆ