<p>ಹಳೇಬೀಡು: ವರ್ಷವಿಡೀ ಮಳೆ, ಬೆಳೆ ಸಮೃದ್ಧವಾಗಿ, ಜನರು ನೆಮ್ಮದಿ ಜೀವನ ನಡೆಸುವಂತಾಗಲೆಂದು ಮುಂಗಾರು ಕೃಷಿ ಆರಂಭವಾಗುವ ಮೊದಲು ಯುಗಾದಿ ದಿನ ಹೊನ್ನಾರು ಹೂಡುವ ಪದ್ಧತಿ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.</p>.<p>ಬಸ್ತಿಹಳ್ಳಿಯಲ್ಲಿ ಹೊನ್ನಾರು ವಿಭಿನ್ನವಾಗಿ ಸಂಭ್ರಮದಿಂದ ನಡೆಯುತ್ತಿದೆ.ಗ್ರಾಮಸ್ಥರು ಯುಗಾದಿ ದಿನ ಜಾನುವಾರುಗಳ ಮೈ ತೊಳೆದು ಪೂಜಿಸುತ್ತಾರೆ. ಮನೆ ಮುಂದೆ ರಂಗೋಲಿ ಬಿಡಿಸಿ, ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿಟ್ಟು ಪೂಜೆ ಸಲ್ಲಿಸುತ್ತಾರೆ.</p>.<p>ನೆಗಿಲು, ನೊಗ ಹೂಡಿಕೊಂಡು ಜಮೀನಿನಲ್ಲಿ ಒಂದು ಸುತ್ತು ಉಳಿಮೆ ಮಾಡುತ್ತಾರೆ. ತಲೆಮಾರಿನಿಂದ ನಡೆದುಕೊಂಡು ಬಂದಿರುವ ಹೊನ್ನಾರು ಹೂಡುವ ಸಂಪ್ರದಾಯಕ್ಕೆ ‘ಚಿನ್ನದ ಉಳಿಮೆ’ ಎಂದು ಕರೆಯಲಾಗುತ್ತದೆ.</p>.<p>ಹಬ್ಬದ ದಿನ ರೈತರ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಹೋಳಿಗೆಸೇರಿದಂತೆ ವಿವಿಧ ಖಾದ್ಯ ತಯಾರಿಸುತ್ತಾರೆ. ಎತ್ತುಗಳಿದ್ದರೆ ಮಾತ್ರ ಉತ್ತಮಬೇಸಾಯ ಎಂದು ನಂಬಿರುವ ಬಸ್ತಿಹಳ್ಳಿ ಜನರು ಹಬ್ಬದ ಊಟವನ್ನು ಎತ್ತುಗಳಿಗೆ ಮೊದಲು ನೀಡಿ, ನಂತರ ಮನೆ ಮಂದಿ ತಿನ್ನುತ್ತಾರೆ.</p>.<p>ಈ ವರ್ಷ ಯಾವ ಅಕ್ಷರದ ಹೆಸರಿನವರು ಹೊನ್ನಾರು ಹೂಡಬೇಕು ಎಂದು ಜೋಯಿಸರು ತಿಳಿಸುತ್ತಾರೆ. ಅವರ ಸೂಚನೆಯಂತೆ ಊರಿನ ಸುತ್ತ ಹೊನ್ನಾರು ಮೆರವಣಿಗೆಯಲ್ಲಿ ಸಾಗುತ್ತದೆ. ಮನೆಗಳ ಮುಂದೆ ಹೊನ್ನಾರು ಹೂಡಿಕೊಂಡು ಬರುವ ಎತ್ತುಗಳಿಗೆ ಆರತಿ ಮಾಡಿ, ಹಣ್ಣು, ಕಾಯಿ ಪೂಜೆ ನೆರವೇರಿಸುತ್ತಾರೆ.</p>.<p>‘ಕೃಷಿ ಕಾಯಕದಲ್ಲಿ ಸಹಾಯವಾಗುವ ಎತ್ತುಗಳನ್ನು ಗೌರವ ಭಾವನೆಯಿಂದ ಕಾಣುವ ಆಚರಣೆ ಹೊನ್ನಾರು. ಭೂಮಿ ತಾಯಿಗೆ ವರ್ಷದ ಮೊದಲು ನೇಗಿಲು ತಾಗಿಸಿ, ಎಲ್ಲರಿಗೂ ನೆಮ್ಮದಿ ನೀಡುವಂತೆ ಪ್ರಾರ್ಥಿಸುವ ಸುದಿನ’ ಎಂದು ಬಸ್ತಿಹಳ್ಳಿ ರೈತ ಬಿ.ಜೆ.ಗಣೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಳೇಬೀಡು: ವರ್ಷವಿಡೀ ಮಳೆ, ಬೆಳೆ ಸಮೃದ್ಧವಾಗಿ, ಜನರು ನೆಮ್ಮದಿ ಜೀವನ ನಡೆಸುವಂತಾಗಲೆಂದು ಮುಂಗಾರು ಕೃಷಿ ಆರಂಭವಾಗುವ ಮೊದಲು ಯುಗಾದಿ ದಿನ ಹೊನ್ನಾರು ಹೂಡುವ ಪದ್ಧತಿ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.</p>.<p>ಬಸ್ತಿಹಳ್ಳಿಯಲ್ಲಿ ಹೊನ್ನಾರು ವಿಭಿನ್ನವಾಗಿ ಸಂಭ್ರಮದಿಂದ ನಡೆಯುತ್ತಿದೆ.ಗ್ರಾಮಸ್ಥರು ಯುಗಾದಿ ದಿನ ಜಾನುವಾರುಗಳ ಮೈ ತೊಳೆದು ಪೂಜಿಸುತ್ತಾರೆ. ಮನೆ ಮುಂದೆ ರಂಗೋಲಿ ಬಿಡಿಸಿ, ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿಟ್ಟು ಪೂಜೆ ಸಲ್ಲಿಸುತ್ತಾರೆ.</p>.<p>ನೆಗಿಲು, ನೊಗ ಹೂಡಿಕೊಂಡು ಜಮೀನಿನಲ್ಲಿ ಒಂದು ಸುತ್ತು ಉಳಿಮೆ ಮಾಡುತ್ತಾರೆ. ತಲೆಮಾರಿನಿಂದ ನಡೆದುಕೊಂಡು ಬಂದಿರುವ ಹೊನ್ನಾರು ಹೂಡುವ ಸಂಪ್ರದಾಯಕ್ಕೆ ‘ಚಿನ್ನದ ಉಳಿಮೆ’ ಎಂದು ಕರೆಯಲಾಗುತ್ತದೆ.</p>.<p>ಹಬ್ಬದ ದಿನ ರೈತರ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಹೋಳಿಗೆಸೇರಿದಂತೆ ವಿವಿಧ ಖಾದ್ಯ ತಯಾರಿಸುತ್ತಾರೆ. ಎತ್ತುಗಳಿದ್ದರೆ ಮಾತ್ರ ಉತ್ತಮಬೇಸಾಯ ಎಂದು ನಂಬಿರುವ ಬಸ್ತಿಹಳ್ಳಿ ಜನರು ಹಬ್ಬದ ಊಟವನ್ನು ಎತ್ತುಗಳಿಗೆ ಮೊದಲು ನೀಡಿ, ನಂತರ ಮನೆ ಮಂದಿ ತಿನ್ನುತ್ತಾರೆ.</p>.<p>ಈ ವರ್ಷ ಯಾವ ಅಕ್ಷರದ ಹೆಸರಿನವರು ಹೊನ್ನಾರು ಹೂಡಬೇಕು ಎಂದು ಜೋಯಿಸರು ತಿಳಿಸುತ್ತಾರೆ. ಅವರ ಸೂಚನೆಯಂತೆ ಊರಿನ ಸುತ್ತ ಹೊನ್ನಾರು ಮೆರವಣಿಗೆಯಲ್ಲಿ ಸಾಗುತ್ತದೆ. ಮನೆಗಳ ಮುಂದೆ ಹೊನ್ನಾರು ಹೂಡಿಕೊಂಡು ಬರುವ ಎತ್ತುಗಳಿಗೆ ಆರತಿ ಮಾಡಿ, ಹಣ್ಣು, ಕಾಯಿ ಪೂಜೆ ನೆರವೇರಿಸುತ್ತಾರೆ.</p>.<p>‘ಕೃಷಿ ಕಾಯಕದಲ್ಲಿ ಸಹಾಯವಾಗುವ ಎತ್ತುಗಳನ್ನು ಗೌರವ ಭಾವನೆಯಿಂದ ಕಾಣುವ ಆಚರಣೆ ಹೊನ್ನಾರು. ಭೂಮಿ ತಾಯಿಗೆ ವರ್ಷದ ಮೊದಲು ನೇಗಿಲು ತಾಗಿಸಿ, ಎಲ್ಲರಿಗೂ ನೆಮ್ಮದಿ ನೀಡುವಂತೆ ಪ್ರಾರ್ಥಿಸುವ ಸುದಿನ’ ಎಂದು ಬಸ್ತಿಹಳ್ಳಿ ರೈತ ಬಿ.ಜೆ.ಗಣೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>