‘ಕನಕಪುರದಿಂದ ಹಾಸನಕ್ಕೆ ಬಂದು ಜೆಡಿಎಸ್ ಸೋಲಿಸುತ್ತೇವೆ ಎನ್ನುತ್ತಾರೆ. ಹಾಸನದಲ್ಲಿ ಕೂಗಿದರೆ, ಹೊಳೆನರಸೀಪುರಕ್ಕೆ ಕೇಳಬೇಕು ಎಂದೂ ಹೇಳುತ್ತಾರೆ. ರಾಜಕೀಯದಲ್ಲಿ ಸೋಲು, ಗೆಲುವು ಸಹಜ. ಈಗ ಇಲ್ಲಿನ ಕೂಗು ಕನಕಪುರದವರೆಗೂ ಕೇಳಬೇಕು’ ಎನ್ನುವ ಮೂಲಕ, ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಸಹೋದರರನ್ನು ಅವರು ಪರೋಕ್ಷವಾಗಿ ಕುಟುಕಿದರು.