ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅದೇ ದಿನ ನೂತನ ಅಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ನನ್ನೊಂದಿಗೆ ಚರ್ಚಿಸಿದ್ದು, ನಾನೂ ಹುದ್ದೆ ಬಿಟ್ಟು ಕೊಡಲು ಒಪ್ಪಿದ್ದೇನೆ. ಪಕ್ಷದಸಂಘಟನೆ, ಅಭಿವೃದ್ಧಿಗೆ ಸಹಾಯವಾಗುವುದಾದರೆ ಎಲ್ಲಾ ತ್ಯಾಗಕ್ಕೂಸಿದ್ಧ’ ಎಂದರು.