ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಮಾತನಾಡಿ, ಪರಿಶಿಷ್ಟ ಜಾತಿ ಆದಿದ್ರಾವಿಡ
ಸಮುದಾಯಕ್ಕೆ ಸೇರಿದ ಅಂದಾಜು 101 ಕುಟುಂಬಗಳು ಗಂಗೂರು ಗ್ರಾಮದ ಮೇಲ್ಜಾತಿಯ ಮನೆಗಳಲ್ಲಿ
ಜೀತ ಮಾಡುತ್ತಿದ್ದರು. 1994ರ ಸೆ. 22ರಂದು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಜೀತಗಾರಿಕೆ ಪದ್ಧತಿ (ನಿರ್ಮೂಲನೆ) ಕಾಯ್ದೆ-1976ರ ಅನ್ವಯ ವಿಮುಕ್ತಿಗೊಳಿಸಿದ್ದರು.ಕಾಯ್ದೆಯ ಅನುಸಾರ ಕೃಷಿ ಭೂಮಿ ಸೇರಿದಂತೆ ವಿವಿಧ ಶಾಶ್ವತ ಪರಿಹಾರ ಸೌಲಭ್ಯಗಳನ್ನು ನೀಡುವಭರವಸೆ ನೀಡಲಾಗಿತ್ತು. ಆದರೆ ಯಾವುದೂ ಈಡೇರಿಲ್ಲ ಎಂದು ಆರೋಪಿಸಿದರು.