ಗ್ರಾಮಸ್ಥರ ಆಕ್ರೋಶ: ಬಯಲು ಸೀಮೆಯಲ್ಲಿ ರಾಸುಗಳು ಹಾಗೂ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಚಿರತೆಯನ್ನು ಹಿಡಿದು ತಾಲ್ಲೂಕಿಗೆ ತಂದು ಬಿಡುತ್ತಿದ್ದಾರೆ. ಮಾವಿನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಚಿರತೆಯನ್ನು ಒಂದು ತಿಂಗಳ ಹಿಂದೆ ಅರಸೀಕೆರೆ ತಾಲ್ಲೂಕಿನಿಂದ ಹಿಡಿದು ತಂದು ಬಿಟ್ಟಿದ್ದಾರೆ ಎಂದು ಮಾವಿನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.