‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚರ್ಚ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹50 ಲಕ್ಷ ಬಿಡುಗಡೆ
ಮಾಡಿದೆ. ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಪಂಚಾಯತ್ ರಾಜ್ ಹಾಸನ ಉಪವಿಭಾಗ ಕಾರ್ಯಪಾಲಕ
ಎಂಜಿನಿಯರ್ ವೆಂಕಟೇಗೌಡ ಹಾಗೂ ಚರ್ಚ್ ಫಾದರ್ ರೊನಾಲ್ಡ್ ಕರ್ಡೋಜಾ, ಒಟ್ಟಾಗಿ ಹಣ ದುರುಪಯೋಗ
ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ’ ಎಂದು ಬುಧವಾರ
ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.