<p>ಹಾಸನ: ‘ನಗರದ ಸಂತ ಅಂತೋಣಿ ಚರ್ಚ್ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ<br />ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ<br />ಕಾರ್ಯಕರ್ತ ಫ್ರಾನ್ಸಿಸ್ ಕ್ಸೇವಿಯರ್ ಒತ್ತಾಯಿಸಿದರು.</p>.<p>‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚರ್ಚ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹50 ಲಕ್ಷ ಬಿಡುಗಡೆ<br />ಮಾಡಿದೆ. ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಪಂಚಾಯತ್ ರಾಜ್ ಹಾಸನ ಉಪವಿಭಾಗ ಕಾರ್ಯಪಾಲಕ<br />ಎಂಜಿನಿಯರ್ ವೆಂಕಟೇಗೌಡ ಹಾಗೂ ಚರ್ಚ್ ಫಾದರ್ ರೊನಾಲ್ಡ್ ಕರ್ಡೋಜಾ, ಒಟ್ಟಾಗಿ ಹಣ ದುರುಪಯೋಗ<br />ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ’ ಎಂದು ಬುಧವಾರ<br />ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಅಂತೋಣಿ ಚರ್ಚ್ಗೆ ಸೇರಿದ್ದ ಸಮುದಾಯ ಭವನವನ್ನು ತಮ್ಮ ಕಾರ್ಯ ಸಾಧನೆಗೆ<br />ಬಳಸಿಕೊಂಡಿದ್ದಾರೆ. ಭವನವನ್ನು ಚರ್ಚ್ ಎಂದು ಉಲ್ಲೇಖಿಸಿ ಕಟ್ಟಡ ದುರಸ್ತಿಯಲ್ಲಿದೆ ಎಂದು ಫೋಟೊ ಸಹಿತ<br />ದಾಖಲೆ ಸೃಷ್ಟಿಸಿದ್ದಾರೆ. ಸಂತ ಅಂತೋಣಿ ಚರ್ಚ್ ಸುಸ್ಥಿತಿಯಲ್ಲಿದ್ದು, ಅನುದಾನಕ್ಕಾಗಿ<br />ದುರಸ್ತಿಯಲ್ಲಿದೆ ಎಂದು ಸುಳ್ಳು ದಾಖಲೆ ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಸಮುದಾಯ ಭವನವನ್ನೇ ಚರ್ಚ್ ಆಗಿ ಮಾರ್ಪಡಿಸಿರುವ ಪರಿಣಾಮ ಯಾವುದೇ ಅಡ್ಡಿಯಿಲ್ಲದೆ ಸರ್ಕಾರ<br />ಅನುದಾನ ಬಿಡುಗಡೆ ಮಾಡಿದೆ. ಆದರೆ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಆಗಿಲ್ಲ. ಅಧಿಕಾರಿ ಹಾಗೂ ಚರ್ಚ್<br />ಫಾದರ್ಗಳ ದುರಾಸೆಯಿಂದ ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ’ ಎಂದು ದೂರಿದರು.</p>.<p>‘ಹಾಸನ ಸೇರಿದಂತೆ ಜಿಲ್ಲೆಯ ಎಂಟು ಚರ್ಚ್ಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾನೂನು ಹೋರಾಟ<br />ಮುಂದುವರಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು<br />ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ರಾಕೇಶ್ ಮೇನೆಜೆಸ್, ಜೆರೋಮ್ ಲೋಬೋ, ಹೆಜಿನ್ ಕ್ವಾಡ್ರೆಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ‘ನಗರದ ಸಂತ ಅಂತೋಣಿ ಚರ್ಚ್ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ<br />ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ<br />ಕಾರ್ಯಕರ್ತ ಫ್ರಾನ್ಸಿಸ್ ಕ್ಸೇವಿಯರ್ ಒತ್ತಾಯಿಸಿದರು.</p>.<p>‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಚರ್ಚ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹50 ಲಕ್ಷ ಬಿಡುಗಡೆ<br />ಮಾಡಿದೆ. ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ, ಪಂಚಾಯತ್ ರಾಜ್ ಹಾಸನ ಉಪವಿಭಾಗ ಕಾರ್ಯಪಾಲಕ<br />ಎಂಜಿನಿಯರ್ ವೆಂಕಟೇಗೌಡ ಹಾಗೂ ಚರ್ಚ್ ಫಾದರ್ ರೊನಾಲ್ಡ್ ಕರ್ಡೋಜಾ, ಒಟ್ಟಾಗಿ ಹಣ ದುರುಪಯೋಗ<br />ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ’ ಎಂದು ಬುಧವಾರ<br />ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಅಂತೋಣಿ ಚರ್ಚ್ಗೆ ಸೇರಿದ್ದ ಸಮುದಾಯ ಭವನವನ್ನು ತಮ್ಮ ಕಾರ್ಯ ಸಾಧನೆಗೆ<br />ಬಳಸಿಕೊಂಡಿದ್ದಾರೆ. ಭವನವನ್ನು ಚರ್ಚ್ ಎಂದು ಉಲ್ಲೇಖಿಸಿ ಕಟ್ಟಡ ದುರಸ್ತಿಯಲ್ಲಿದೆ ಎಂದು ಫೋಟೊ ಸಹಿತ<br />ದಾಖಲೆ ಸೃಷ್ಟಿಸಿದ್ದಾರೆ. ಸಂತ ಅಂತೋಣಿ ಚರ್ಚ್ ಸುಸ್ಥಿತಿಯಲ್ಲಿದ್ದು, ಅನುದಾನಕ್ಕಾಗಿ<br />ದುರಸ್ತಿಯಲ್ಲಿದೆ ಎಂದು ಸುಳ್ಳು ದಾಖಲೆ ಸಲ್ಲಿಸಿದ್ದಾರೆ’ ಎಂದು ಆರೋಪಿಸಿದರು.</p>.<p>‘ಸಮುದಾಯ ಭವನವನ್ನೇ ಚರ್ಚ್ ಆಗಿ ಮಾರ್ಪಡಿಸಿರುವ ಪರಿಣಾಮ ಯಾವುದೇ ಅಡ್ಡಿಯಿಲ್ಲದೆ ಸರ್ಕಾರ<br />ಅನುದಾನ ಬಿಡುಗಡೆ ಮಾಡಿದೆ. ಆದರೆ ಒಂದು ರೂಪಾಯಿ ಅಭಿವೃದ್ಧಿ ಕೆಲಸ ಆಗಿಲ್ಲ. ಅಧಿಕಾರಿ ಹಾಗೂ ಚರ್ಚ್<br />ಫಾದರ್ಗಳ ದುರಾಸೆಯಿಂದ ಸಾರ್ವಜನಿಕ ತೆರಿಗೆ ಹಣ ಪೋಲಾಗುತ್ತಿದೆ’ ಎಂದು ದೂರಿದರು.</p>.<p>‘ಹಾಸನ ಸೇರಿದಂತೆ ಜಿಲ್ಲೆಯ ಎಂಟು ಚರ್ಚ್ಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಾನೂನು ಹೋರಾಟ<br />ಮುಂದುವರಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು<br />ಹೇಳಿದರು.</p>.<p>ಸುದ್ದಿಗೋಷ್ಠಿಯಲ್ಲಿ ರಾಕೇಶ್ ಮೇನೆಜೆಸ್, ಜೆರೋಮ್ ಲೋಬೋ, ಹೆಜಿನ್ ಕ್ವಾಡ್ರೆಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>