<p><br /><strong>ಹಾಸನ: </strong>ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭೂಮಿ ಹದಗೊಳಿಸುವಲ್ಲಿ ರೈತರು ನಿರತರಾಗಿದ್ದಾರೆ.</p>.<p>ಮುಂಗಾರು ಹಂಗಾಮಿನಲ್ಲಿ ಒಟ್ಟು 2.60 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಈವರೆಗೂ 73,698 ಹೆಕ್ಟೇರ್ ಬಿತ್ತನೆ ಆಗಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇಕಡಾ 10 ಕಡಿಮೆಯಾಗಿದೆ.</p>.<p>ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಈಗ ಮಳೆ ಬಿಡುವು ನೀಡಿರುವುದರಿಂದ ಜಮೀನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ದಗೊಳಿಸಲಾಗುತ್ತಿದೆ.</p>.<p>ಜುಲೈ ಮೊದಲ ವಾರದಿಂದಲೇ ಬಿತ್ತನೆ ಕಾರ್ಯ ಆರಂಭಗೊಳ್ಳಲಿರುವ ಕಾರಣ ಮುಸುಕಿನ ಜೋಳ ಬಿತ್ತನೆ ಬೀಜಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಕೃಷಿ ಇಲಾಖೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ.</p>.<p>ಜಿಲ್ಲೆಯಲ್ಲಿ ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯ ಇದ್ದರೂ 2 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಾಗಿದೆ. 50 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇದು ಜಲಾಶಯದ ನೀರಿನ ಆಧಾರದ ಮೇಲೆ ನಿರ್ಧಾರವಾಗುತ್ತದೆ.</p>.<p>ಮುಸುಕಿನ ಜೋಳ, ರಾಗಿ, ಭತ್ತ ಜಿಲ್ಲೆಯ ಪ್ರಮುಖ ಬೆಳೆಗಳು. 70 ಸಾವಿರ ಹೆಕ್ಟೇರ್ ರಾಗಿ ಬಿತ್ತನೆಗೆ 80 ಹೆಕ್ಟೇರ್ , 50 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಪೈಕಿ 80 ಹೆಕ್ಟೇರ್ ಹಾಗೂ ದ್ವಿದಳ ಧಾನ್ಯ 35 ಸಾವಿರ ಹೆಕ್ಟೇರ್ ಗುರಿ ಪೈಕಿ 23 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಆಗಿದೆ. ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು 12,140 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.</p>.<p>ಪ್ರಸಕ್ತ ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿ ಪೈಕಿ 36,504 ಹೆಕ್ಟೇರ್ಲ್ಲಿ ಬಿತ್ತನೆ ಆಗಿದೆ. ಇದು 135 ದಿನಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿ, ರಸಗೊಬ್ಬರ ಹಾಕಿದ ಬಳಿಕ ರೈತರು ಕೊಯ್ಲು ಸಂದರ್ಭ ಇತ್ತ ಸುಳಿಯುತ್ತಾರೆ.</p>.<p>ಆಲೂರು–3,300 ಹೆಕ್ಟೇರ್, ಅರಕಲಗೂಡು–5,240 ಹೆಕ್ಟೇರ್, ಅರಸೀಕೆರೆ–2,870 ಹೆಕ್ಟೇರ್, ಬೇಲೂರು–11,675 ಹೆಕ್ಟೇರ್, ಹೊಳೆನರಸೀಪುರ–3,775 ಹೆಕ್ಟೇರ್, ಚನ್ನರಾಯಪಟ್ಟಣ–20210 ಹೆಕ್ಟೇರ್, ಹಾಸನ–6769 ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.</p>.<p>ಹೈಬ್ರಿಡ್ ತಳಿಗಳಾದ ಗಂಗಾ ಕಾವೇರಿ, ಪಯನಿರ್, ಸಿಪಿ ಗೆ ಹೆಚ್ಚು ಬೇಡಿಕೆ ಇದೆ. ಐದು ಕೆ.ಜಿ. ಬ್ಯಾಗ್ ₹ 1100 ರಿಂದ ₹ 1200 ಕ್ಕೆ ಮಾರಾಟವಾಗುತ್ತಿದೆ.</p>.<p>‘ಬೆಳೆ ನಷ್ಟದಿಂದ ಶುಂಠಿ, ಆಲೂಗೆಡ್ಡೆ ಬಿತ್ತನೆ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ ರೈತರು ಕಡಿಮೆ ಅವಧಿಯಲ್ಲಿ ಬೆಳೆಯುವ ಮುಸುಕಿನ ಜೋಳದತ್ತ ಹೆಚ್ಚು ಕೇಂದ್ರಕರಿಸುತ್ತಿದ್ದಾರೆ. ಎಕರೆಗೆ 20 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ₹ 1300–₹ 1400 ದರ ಇದೆ. ₹ 8 ರಿಂದ 10 ಸಾವಿರ ಖರ್ಚು ಮಾಡಿದರೆ, ₹ 25 ಸಾವಿರ ಆದಾಯ ಗಳಿಸಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮದುಸೂದನ್ ತಿಳಿಸಿದರು.</p>.<p>ಈಗಾಗಲೇ ಬಿತ್ತನೆ ಬೀಜ 10,328 ಕ್ವಿಂಟಲ್ ಸರಬರಾಜು ಆಗಿದ್ದು, ಇದರಲ್ಲಿ 57,494 ರೈತರಿಗೆ 7,036 ಕ್ವಿಂಟಲ್ ವಿತರಿಸಲಾಗಿದೆ. ರೈತರು ಕೃಷಿ ಇಲಾಖೆಯಿಂದ ಮಾತ್ರ ಬಿತ್ತನೆ ಬೀಜ ಕೊಳ್ಳುವುದಿಲ್ಲ. ರೈತರೇ ಬೆಳೆದುಕೊಂಡಿರುವ ಬಿತ್ತನೆ ಬೀಜವನ್ನೂ ಪರಸ್ಪರ ಹಂಚಿಕೊಳ್ಳುವುದು ಉಂಟು.</p>.<p>ಮುಂಗಾರಿಗೆ 1,14,347 ಟನ್ ರಸಗೊಬ್ಬರ ನಿಗದಿಯಾಗಿದ್ದು, ಈವರೆಗೆ 26,501 ಟನ್ ಪೂರೈಕೆಯಾಗಿದೆ. 20 ಸಾವಿರ ಟನ್ ದಾಸ್ತಾನು ಇರುವುದರಿಂದ ಸದ್ಯಕ್ಕೆ ಕೊರತೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /><strong>ಹಾಸನ: </strong>ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಭೂಮಿ ಹದಗೊಳಿಸುವಲ್ಲಿ ರೈತರು ನಿರತರಾಗಿದ್ದಾರೆ.</p>.<p>ಮುಂಗಾರು ಹಂಗಾಮಿನಲ್ಲಿ ಒಟ್ಟು 2.60 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಈವರೆಗೂ 73,698 ಹೆಕ್ಟೇರ್ ಬಿತ್ತನೆ ಆಗಿದ್ದು, ಕಳೆದ ವರ್ಷಕ್ಕೆ ಹೊಲಿಸಿದರೆ ಶೇಕಡಾ 10 ಕಡಿಮೆಯಾಗಿದೆ.</p>.<p>ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಈಗ ಮಳೆ ಬಿಡುವು ನೀಡಿರುವುದರಿಂದ ಜಮೀನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಭೂಮಿ ಸಿದ್ದಗೊಳಿಸಲಾಗುತ್ತಿದೆ.</p>.<p>ಜುಲೈ ಮೊದಲ ವಾರದಿಂದಲೇ ಬಿತ್ತನೆ ಕಾರ್ಯ ಆರಂಭಗೊಳ್ಳಲಿರುವ ಕಾರಣ ಮುಸುಕಿನ ಜೋಳ ಬಿತ್ತನೆ ಬೀಜಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಕೃಷಿ ಇಲಾಖೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ.</p>.<p>ಜಿಲ್ಲೆಯಲ್ಲಿ ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯ ಇದ್ದರೂ 2 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಾಗಿದೆ. 50 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಇದು ಜಲಾಶಯದ ನೀರಿನ ಆಧಾರದ ಮೇಲೆ ನಿರ್ಧಾರವಾಗುತ್ತದೆ.</p>.<p>ಮುಸುಕಿನ ಜೋಳ, ರಾಗಿ, ಭತ್ತ ಜಿಲ್ಲೆಯ ಪ್ರಮುಖ ಬೆಳೆಗಳು. 70 ಸಾವಿರ ಹೆಕ್ಟೇರ್ ರಾಗಿ ಬಿತ್ತನೆಗೆ 80 ಹೆಕ್ಟೇರ್ , 50 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಪೈಕಿ 80 ಹೆಕ್ಟೇರ್ ಹಾಗೂ ದ್ವಿದಳ ಧಾನ್ಯ 35 ಸಾವಿರ ಹೆಕ್ಟೇರ್ ಗುರಿ ಪೈಕಿ 23 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಆಗಿದೆ. ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು 12,140 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.</p>.<p>ಪ್ರಸಕ್ತ ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿ ಪೈಕಿ 36,504 ಹೆಕ್ಟೇರ್ಲ್ಲಿ ಬಿತ್ತನೆ ಆಗಿದೆ. ಇದು 135 ದಿನಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿ, ರಸಗೊಬ್ಬರ ಹಾಕಿದ ಬಳಿಕ ರೈತರು ಕೊಯ್ಲು ಸಂದರ್ಭ ಇತ್ತ ಸುಳಿಯುತ್ತಾರೆ.</p>.<p>ಆಲೂರು–3,300 ಹೆಕ್ಟೇರ್, ಅರಕಲಗೂಡು–5,240 ಹೆಕ್ಟೇರ್, ಅರಸೀಕೆರೆ–2,870 ಹೆಕ್ಟೇರ್, ಬೇಲೂರು–11,675 ಹೆಕ್ಟೇರ್, ಹೊಳೆನರಸೀಪುರ–3,775 ಹೆಕ್ಟೇರ್, ಚನ್ನರಾಯಪಟ್ಟಣ–20210 ಹೆಕ್ಟೇರ್, ಹಾಸನ–6769 ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.</p>.<p>ಹೈಬ್ರಿಡ್ ತಳಿಗಳಾದ ಗಂಗಾ ಕಾವೇರಿ, ಪಯನಿರ್, ಸಿಪಿ ಗೆ ಹೆಚ್ಚು ಬೇಡಿಕೆ ಇದೆ. ಐದು ಕೆ.ಜಿ. ಬ್ಯಾಗ್ ₹ 1100 ರಿಂದ ₹ 1200 ಕ್ಕೆ ಮಾರಾಟವಾಗುತ್ತಿದೆ.</p>.<p>‘ಬೆಳೆ ನಷ್ಟದಿಂದ ಶುಂಠಿ, ಆಲೂಗೆಡ್ಡೆ ಬಿತ್ತನೆ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ ರೈತರು ಕಡಿಮೆ ಅವಧಿಯಲ್ಲಿ ಬೆಳೆಯುವ ಮುಸುಕಿನ ಜೋಳದತ್ತ ಹೆಚ್ಚು ಕೇಂದ್ರಕರಿಸುತ್ತಿದ್ದಾರೆ. ಎಕರೆಗೆ 20 ಕ್ವಿಂಟಲ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ ₹ 1300–₹ 1400 ದರ ಇದೆ. ₹ 8 ರಿಂದ 10 ಸಾವಿರ ಖರ್ಚು ಮಾಡಿದರೆ, ₹ 25 ಸಾವಿರ ಆದಾಯ ಗಳಿಸಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮದುಸೂದನ್ ತಿಳಿಸಿದರು.</p>.<p>ಈಗಾಗಲೇ ಬಿತ್ತನೆ ಬೀಜ 10,328 ಕ್ವಿಂಟಲ್ ಸರಬರಾಜು ಆಗಿದ್ದು, ಇದರಲ್ಲಿ 57,494 ರೈತರಿಗೆ 7,036 ಕ್ವಿಂಟಲ್ ವಿತರಿಸಲಾಗಿದೆ. ರೈತರು ಕೃಷಿ ಇಲಾಖೆಯಿಂದ ಮಾತ್ರ ಬಿತ್ತನೆ ಬೀಜ ಕೊಳ್ಳುವುದಿಲ್ಲ. ರೈತರೇ ಬೆಳೆದುಕೊಂಡಿರುವ ಬಿತ್ತನೆ ಬೀಜವನ್ನೂ ಪರಸ್ಪರ ಹಂಚಿಕೊಳ್ಳುವುದು ಉಂಟು.</p>.<p>ಮುಂಗಾರಿಗೆ 1,14,347 ಟನ್ ರಸಗೊಬ್ಬರ ನಿಗದಿಯಾಗಿದ್ದು, ಈವರೆಗೆ 26,501 ಟನ್ ಪೂರೈಕೆಯಾಗಿದೆ. 20 ಸಾವಿರ ಟನ್ ದಾಸ್ತಾನು ಇರುವುದರಿಂದ ಸದ್ಯಕ್ಕೆ ಕೊರತೆ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>