ಬಾವಿಯಲ್ಲಿ ಕಸಕಡ್ಡಿ ತುಂಬಿ ಕೊಳೆಯುತ್ತಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿದೆ. ಬಾವಿ ಯಿಂದ ದುರ್ವಾಸನೆಯೂ ಬರುತ್ತಿದ್ದು, ಗ್ರಂಥಾಲಯ ಹಾಗೂ ನಾಡಕಚೇರಿಗೆ ಬಂದವರಿಗೂ ತೊಂದರೆಯಾಗುತ್ತಿದೆ. ಬಾವಿಯ ಒಳಭಾಗದ ಒಂದು ಬದಿಯಲ್ಲಿ ಗಿಡಗಂಟಿ ಬೆಳೆಯುತ್ತಿದೆ. ಇದರಿಂದ ಬಾವಿಯ ಕಟ್ಟಡ ಸಡಿ ಲಗೊಳ್ಳುವ ಸಾಧ್ಯತೆ ಇದೆ ಎಂದು ರೈತ ಮುಖಂಡ ಕೆ.ಪಿ.ಕುಮಾರ್ ತಿಳಿಸಿದ್ದಾರೆ.