ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮೋಹನ್ಕುಮಾರ್, ‘ಕಾಫಿ ತೋಟದಲ್ಲಿನ ಮರಗಳನ್ನು ಕಡಿದ ಬಳಿಕ ಅದರ ದೊಡ್ಡ- ದೊಡ್ಡ ಬೇರು, ದಿಮ್ಮೆ ಮತ್ತು ಇನ್ನಿತರ ವಸ್ತುಗಳನ್ನು ಕೆರೆಗೆ ಹಾಕಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದ್ದು, ಕೆಟ್ಟ ವಾಸನೆ ಬರುತ್ತಿದೆ. ಜಾನುವಾರುಗಳಿಗೆ ನೀರು ಕುಡಿಯಲು ಕಷ್ಟವಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನನ್ವಯ ಬಂದು ಪರಿಶೀಲಿಸಿದ್ದೇನೆ. ಕೆರೆಗೆ ತ್ಯಾಜ್ಯ ಹಾಕಿದವರಿಗೆ ತೆರವು ಮಾಡಲು ಮೌಖಿಕವಾಗಿ ತಿಳಿಸಿದ್ದೇನೆ. ತೆರವು ಮಾಡದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗು ವುದು’ ಎಂದು ಹೇಳಿದರು.