<blockquote>ಕಾಡಾನೆ ಹಾವಳಿ ಆತಂಕದ ಮಧ್ಯೆಯೂ ನಾಟಿಗೆ ಸಿದ್ಧತೆ ಸಸಿಗಳನ್ನು ಬೆಳೆಸುತ್ತಿರುವ ರೈತರು | ಗರಿಗೆದರಿದ ಕೃಷಿ ಚಟುವಟಿಕೆ </blockquote>.<p><strong>ಆಲೂರು:</strong> ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ರೈತರು ಭೂಮಿ ಹದ ಮತ್ತು ಹಸನು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.</p>.<p>ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿರುವ ಗದ್ದೆಯಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಬರ ಹರತೆ ಹೊಡೆದು ಕಳೆ ತೆಗೆದಿದ್ದಾರೆ. ಜೂನ್-ಜುಲೈನಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗದ್ದೆಗೆ ನೀರು ಸಂಗ್ರಹಿಸಿ, ನೀರು ಹರತೆ ಹೊಡೆದು, ಗದ್ದೆಯಿಂದ ಕನಿಷ್ಠ ಒಂದು ವಾರ ಅಥವಾ 15 ದಿನ ನೀರು ಹೊರ ಹೋಗದಂತೆ ತಡೆದು ನಿಲ್ಲಿಸುತ್ತಾರೆ.</p>.<p>ಈ ಅವಧಿಯಲ್ಲಿ ಹರತೆ ಸಂದರ್ಭದಲ್ಲಿ ಕಿತ್ತಿರುವ ಮಣ್ಣು ತಿಳಿಯಾಗಿ, ಭತ್ತದ ಸಸಿ ಮಡಿಲನ್ನು ಸೇರುತ್ತದೆ. ಇದರಿಂದ ಭತ್ತ ಹುಲುಸಾಗಿ ಬೆಳೆಯುತ್ತದೆ. ಮನೆಯಲ್ಲಿ ಕೃಷಿ ಮಾಡುವವರ ಜೊತೆ ಎತ್ತುಗಳಿದ್ದರೆ ಮಾತ್ರ ಇಂತಹ ಕೆಲಸವನ್ನು ಮಾಡಲು ಸಾಧ್ಯ ಎನ್ನುತ್ತಾರೆ ರೈತರು.</p>.<p>ನಾಟಿ ಮಾಡುವ ರೈತರು ಟ್ರ್ಯಾಕ್ಟರ್ ಬಳಸಿ ಗದ್ದೆಗಳನ್ನು ಉಳುಮೆ ಮಾಡಿ ನೀರು ಕಟ್ಟಿದ್ದಾರೆ. ಸಸಿ ಮಡಿಲನ್ನು ಮಾಡಿದ್ದಾರೆ. ಸಸಿ ಹುಟ್ಟಿದ 8-10 ದಿನಗಳೊಳಗೆ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಒಟ್ಟಾರೆ ಗದ್ದೆಯಲ್ಲಿ ಭತ್ತದ ಸಸಿ ನೆಡುವ ಸಂದರ್ಭದಲ್ಲಿ ತುಂತುರು ಮಳೆಯಾದರೆ ಉತ್ತಮ ಎನ್ನುತ್ತಾರೆ ರೈತರು.</p>.<p>ಭತ್ತ ನಾಟಿ ಕಾರ್ಯ ಮುಗಿದ ನಂತರ ದಿಢೀರನೆ ಬಿಸಿಲು ವಾತಾವರಣ ಸೃಷ್ಟಿಯಾಗಿ, 15 ದಿನಗಟ್ಟಲೆ ಮಳೆಯಾಗದಿದ್ದರೆ ನಾಟಿ ಮಾಡಿರುವ ಗದ್ದೆಗಳಿಗೆ ತೊಂದರೆಯಾಗಲಿದೆ.</p>.<p>ನಾಟಿ ಮಾಡಿದ ನಂತರ ಎಂಟು ದಿನಗಳಿಗೊಮ್ಮೆ ಗದ್ದೆಯಿಂದ ನೀರನ್ನು ಹೊರ ತೆಗೆದು ಪುನಃ ಒಂದೆರಡು ದಿನದ ನಂತರ ನೀರು ಹಾಯಿಸಿ ಸಂಗ್ರಹಿಸಬೇಕು. ಭತ್ತ ನಾಟಿ ಮಾಡಲು ಗದ್ದೆಯಲ್ಲಿ ಸದ್ಯಕ್ಕೆ ಕೆರೆ ಕಟ್ಟೆಗಳಲ್ಲಿ ನೀರಿದೆ. ನಾಟಿ ಕೆಲಸ ಪೂರ್ಣಗೊಳಿಸಲು ಅನುಮಾನವಿಲ್ಲ.</p>.<div><blockquote>ಕೆರೆಗಳು ತುಂಬಿದ್ದು ಆಗಾಗ ಮಳೆಯಾದರೆ ಭತ್ತದ ಕೃಷಿ ಆಶಾದಾಯಕವಾಗುತ್ತದೆ. ತಾಂತ್ರಿಕ ಬಳಸಿದರೂ ಸಸಿ ನಾಟಿ ಮಾಡಲು ಮಹಿಳಾ ಕೃಷಿ ಕಾರ್ಮಿಕರ ಅಭಾವ ತೀವ್ರ ತಲೆದೋರಿದೆ.</blockquote><span class="attribution">ಕೆ. ಎಚ್. ರಾಜೇಶ್ ಕಂದಾವರದ ಕೃಷಿಕ</span></div>.<div><blockquote>ತಾಲ್ಲೂಕಿನಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗ ಮಳೆ ಆಗುತ್ತಿದ್ದು ನಾಟಿಗೆ ಉತ್ತಮ ಸಮಯ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿದೆ</blockquote><span class="attribution">ರಮೇಶ್ ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಕಾಡಾನೆ ಹಾವಳಿ ಆತಂಕದ ಮಧ್ಯೆಯೂ ನಾಟಿಗೆ ಸಿದ್ಧತೆ ಸಸಿಗಳನ್ನು ಬೆಳೆಸುತ್ತಿರುವ ರೈತರು | ಗರಿಗೆದರಿದ ಕೃಷಿ ಚಟುವಟಿಕೆ </blockquote>.<p><strong>ಆಲೂರು:</strong> ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ರೈತರು ಭೂಮಿ ಹದ ಮತ್ತು ಹಸನು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.</p>.<p>ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿರುವ ಗದ್ದೆಯಲ್ಲಿ ಬೆಳೆದಿರುವ ಭತ್ತದ ಬೆಳೆಗೆ ಬರ ಹರತೆ ಹೊಡೆದು ಕಳೆ ತೆಗೆದಿದ್ದಾರೆ. ಜೂನ್-ಜುಲೈನಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗದ್ದೆಗೆ ನೀರು ಸಂಗ್ರಹಿಸಿ, ನೀರು ಹರತೆ ಹೊಡೆದು, ಗದ್ದೆಯಿಂದ ಕನಿಷ್ಠ ಒಂದು ವಾರ ಅಥವಾ 15 ದಿನ ನೀರು ಹೊರ ಹೋಗದಂತೆ ತಡೆದು ನಿಲ್ಲಿಸುತ್ತಾರೆ.</p>.<p>ಈ ಅವಧಿಯಲ್ಲಿ ಹರತೆ ಸಂದರ್ಭದಲ್ಲಿ ಕಿತ್ತಿರುವ ಮಣ್ಣು ತಿಳಿಯಾಗಿ, ಭತ್ತದ ಸಸಿ ಮಡಿಲನ್ನು ಸೇರುತ್ತದೆ. ಇದರಿಂದ ಭತ್ತ ಹುಲುಸಾಗಿ ಬೆಳೆಯುತ್ತದೆ. ಮನೆಯಲ್ಲಿ ಕೃಷಿ ಮಾಡುವವರ ಜೊತೆ ಎತ್ತುಗಳಿದ್ದರೆ ಮಾತ್ರ ಇಂತಹ ಕೆಲಸವನ್ನು ಮಾಡಲು ಸಾಧ್ಯ ಎನ್ನುತ್ತಾರೆ ರೈತರು.</p>.<p>ನಾಟಿ ಮಾಡುವ ರೈತರು ಟ್ರ್ಯಾಕ್ಟರ್ ಬಳಸಿ ಗದ್ದೆಗಳನ್ನು ಉಳುಮೆ ಮಾಡಿ ನೀರು ಕಟ್ಟಿದ್ದಾರೆ. ಸಸಿ ಮಡಿಲನ್ನು ಮಾಡಿದ್ದಾರೆ. ಸಸಿ ಹುಟ್ಟಿದ 8-10 ದಿನಗಳೊಳಗೆ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಒಟ್ಟಾರೆ ಗದ್ದೆಯಲ್ಲಿ ಭತ್ತದ ಸಸಿ ನೆಡುವ ಸಂದರ್ಭದಲ್ಲಿ ತುಂತುರು ಮಳೆಯಾದರೆ ಉತ್ತಮ ಎನ್ನುತ್ತಾರೆ ರೈತರು.</p>.<p>ಭತ್ತ ನಾಟಿ ಕಾರ್ಯ ಮುಗಿದ ನಂತರ ದಿಢೀರನೆ ಬಿಸಿಲು ವಾತಾವರಣ ಸೃಷ್ಟಿಯಾಗಿ, 15 ದಿನಗಟ್ಟಲೆ ಮಳೆಯಾಗದಿದ್ದರೆ ನಾಟಿ ಮಾಡಿರುವ ಗದ್ದೆಗಳಿಗೆ ತೊಂದರೆಯಾಗಲಿದೆ.</p>.<p>ನಾಟಿ ಮಾಡಿದ ನಂತರ ಎಂಟು ದಿನಗಳಿಗೊಮ್ಮೆ ಗದ್ದೆಯಿಂದ ನೀರನ್ನು ಹೊರ ತೆಗೆದು ಪುನಃ ಒಂದೆರಡು ದಿನದ ನಂತರ ನೀರು ಹಾಯಿಸಿ ಸಂಗ್ರಹಿಸಬೇಕು. ಭತ್ತ ನಾಟಿ ಮಾಡಲು ಗದ್ದೆಯಲ್ಲಿ ಸದ್ಯಕ್ಕೆ ಕೆರೆ ಕಟ್ಟೆಗಳಲ್ಲಿ ನೀರಿದೆ. ನಾಟಿ ಕೆಲಸ ಪೂರ್ಣಗೊಳಿಸಲು ಅನುಮಾನವಿಲ್ಲ.</p>.<div><blockquote>ಕೆರೆಗಳು ತುಂಬಿದ್ದು ಆಗಾಗ ಮಳೆಯಾದರೆ ಭತ್ತದ ಕೃಷಿ ಆಶಾದಾಯಕವಾಗುತ್ತದೆ. ತಾಂತ್ರಿಕ ಬಳಸಿದರೂ ಸಸಿ ನಾಟಿ ಮಾಡಲು ಮಹಿಳಾ ಕೃಷಿ ಕಾರ್ಮಿಕರ ಅಭಾವ ತೀವ್ರ ತಲೆದೋರಿದೆ.</blockquote><span class="attribution">ಕೆ. ಎಚ್. ರಾಜೇಶ್ ಕಂದಾವರದ ಕೃಷಿಕ</span></div>.<div><blockquote>ತಾಲ್ಲೂಕಿನಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗ ಮಳೆ ಆಗುತ್ತಿದ್ದು ನಾಟಿಗೆ ಉತ್ತಮ ಸಮಯ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿದೆ</blockquote><span class="attribution">ರಮೇಶ್ ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>