ಸಕಲೇಶಪುರದ ಹೆಬ್ಬಸಾಲೆ ನಿವಾಸಿ, ಕಾಫಿ ಬೆಳೆಗಾರ ಪ್ರಶಾಂತ್ ಕುಡಿದ ಮತ್ತಿನಲ್ಲಿ ‘ನಿನ್ನನ್ನು ಸಾಯಿಸುತ್ತೇನೆ’ ಎಂದು ಸುತ್ತಿಗೆ ಎತ್ತುವ, ಅದಕ್ಕೆ ಪ್ರತಿಯಾಗಿ ಮಗಳು, ‘ಸಾಯಿಸು’ ಎನ್ನುವ ಸಂಭಾಷಣೆ ವಿಡಿಯೋದಲ್ಲಿದೆ. ಅದಾದ ಬಳಿಕ ‘ಕೆಜಿಎಫ್ ನೋಡಿದ್ದೀಯಾ, ನಾನು ಮಯೂರ... ನಾನಿರುವುದೇ ನಿಮಗಾಗಿ’ ಎನ್ನುತ್ತಾ ಹೆಗಲ ಮೇಲಿರಿಸಿಕೊಂಡ ಸುತ್ತಿಗೆ ಹಿಡಿದು ಪುತ್ರಿಯತ್ತ ಬೀಸುವ ದೃಶ್ಯ ಇದೆ. ಬಾಲಕಿಯ ಕೈಗೆ ಸುತ್ತಿಗೆ ಏಟು ಬಿದ್ದಿದೆ.