ಸಕಲೇಶಪುರ (ಹಾಸನ): ತಾಲ್ಲೂಕಿನ ಹಲವೆಡೆ ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ಸಾಧಾರಣ ಮಳೆಯಾಯಿತು.
ಪಟ್ಟಣದ ಸುತ್ತಮುತ್ತ, ಬಾಳ್ಳುಪೇಟೆ, ಹಾನುಬಾಳು, ಬ್ಯಾಕರವಳ್ಳಿ ಪ್ರದೇಶದಲ್ಲಿ ಸಂಜೆ 5ರಿಂದ ಸುಮಾರು ಅರ್ಧಗಂಟೆ ಮಳೆ ಸುರಿಯಿತು. ಕೆಲವೆಡೆ ಕೊಯ್ಲು ಮಾಡಿ ಗದ್ದೆಯಲ್ಲಿಯೇ ಬಿಟ್ಟಿದ್ದ ಭತ್ತ ಒದ್ದೆಯಾಗಿದೆ.
ಕಾಫಿ ಹಣ್ಣನ್ನು ಒಣಗಿಸಲು ಮಳೆ, ಮೋಡ ಕವಿದ ವಾತಾವರಣ ಅಡ್ಡಿಯಾಗಿದೆ.