ಹೊಳೆನರಸೀಪುರ: ಕಳೆದ ಒಂದೂವರೆ ತಿಂಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಂಧಿಸಲು ಹೋದ ನಗರಠಾಣೆ ಎಸ್.ಐ. ಕುಮಾರ್ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಬಿದರಕ್ಕ ಗ್ರಾಮದ ಯುವಕ ರೌಡಿ ಶೀಟರ್ ಸುಧಾಕರನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಪತ್ತೆಗೆ ಬಲೆಬೀಸಿದ್ದ ಪೊಲೀಸರು ಶುಕ್ರವಾರ ಎಸ್.ಐ. ಕುಮಾರ್, ಸಿಬ್ಬಂದಿ ಚಿದಾನಂದ, ಮಂಜೇಗೌಡ, ಸಂಗಮ್, ಆರೋಪಿಯನ್ನು ಬೆಂಗಳೂರಿನ ಗೋಕಾಕ್ ಪಾರ್ಕ್ನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.