ಹಾಸನ: ದೊಡ್ಡ ದೊಡ್ಡ ಕಟ್ಟಡ ಕಟ್ಟುವುದಷ್ಟೇ ಅಭಿವೃದ್ಧಿ ಅಲ್ಲ. ಮೊದಲು ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಿರುವ ರಸ್ತೆ, ಒಳಚರಂಡಿ, ಉದ್ಯಾನ ಮತ್ತಿತರ ಸಣ್ಣಪುಟ್ಟಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ ಪ್ರೀತಂಗೌಡ ಪರೋಕ್ಷವಾಗಿ ಜೆಡಿಎಸ್ನಾಯಕರಿಗೆ ತಿರುಗೇಟು ನೀಡಿದರು.
ನಗರದ ಎಂ.ಜಿ ರಸ್ತೆ ಬಳಿ ವಿದ್ಯಾನಗರ ಬಡಾವಣೆಯಲ್ಲಿ ಬುಧವಾರ ₹7.86 ಕೋಟಿವೆಚ್ಚದಲ್ಲಿ ಸ್ವಾತಂತ್ರ್ಯ ಉದ್ಯಾನ ಅಭಿವೃದ್ಧಿ, ಒಳಚರಂಡಿ, ಗ್ರಂಥಾಲಯ ಮತ್ತುಯೋಗಾಲಯ ನಿರ್ಮಾಣ ಮತ್ತಿತರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿಮಾತನಾಡಿದರು.
ರಾಜ್ಯದ 223 ವಿಧಾನಸಭಾ ಶಾಸಕರು ಹಾಸನದತ್ತ ತಿರುಗಿ ನೋಡುವಂತೆ ಕ್ಷೇತ್ರದಅಭಿವೃದ್ಧಿಗೆ ಈಗಾಗಲೇ ರೂಪುರೇಷೆ ಸಿದ್ಧಗೊಂಡಿದ್ದು, ಮಾದರಿ ಕ್ಷೇತ್ರವನ್ನಾಗಿಸಲುಪಣ ತೊಟ್ಟಿದ್ದೇನೆ ಎಂದು ಹೇಳಿದರು.
ಈ ಹಿಂದೆ ₹144 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಪಡಿಸಲಾಗುವುದುಎಂಬುದು ಕೇವಲ ಪೇಪರ್ನಲ್ಲಿ ಮಾತ್ರ ಇತ್ತು. ಆದರೆ ಯಾವುದೇ ಯೋಜನೆರೂಪುಗೊಂಡಿರಲಿಲ್ಲ. ಯಡಿಯೂರಪ್ಪ ಅವರು ಹಾಸನ ನಗರದ 9 ಪಾರ್ಕ್ ಮತ್ತು 6ಕೆರೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿದ್ದರು ಎಂದು ಮಾಹಿತಿ ನೀಡಿದರು.
ಮೊದಲು ಎಂ.ಜಿ. ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಹಾಕಲಾಗುತಿತ್ತು. ಇದನ್ನು ತಡೆಯುವನಿಟ್ಟಿನಲ್ಲಿ ನಗರದ ಎಂ.ಜಿ ರಸ್ತೆಯಲ್ಲಿ ಫುಡ್ಕೋರ್ಟ್ ನಿರ್ಮಿಸಲಾಗಿದೆ. ಇದರಿಂದನಗರದ ಸ್ವಚ್ಛತೆ ಕಾಪಾಡುವುದರೊಂದಿಗೆ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹಾಸನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಜನರಕೆಲಸವನ್ನು ಮಾಡಿಸುತ್ತಿದ್ದೇನೆ. ಹಾಗಾಗಿ ಕಾಮಗಾರಿಯ ಗುಣಮಟ್ಟವನ್ನುನೋಡಿಕೊಳ್ಳುವುದು ನಾಗರಿಕರ ಜವಾಬ್ದಾರಿ ಎಂದರು.
ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳಾದ ಪುಟ್ಟರಾಜು, ಸುಬ್ಬುಸ್ವಾಮಿ,ಪುಟ್ಟೇಗೌಡ, ಕಿಶೋರ್ ಕುಮಾರ್, ಪುಟ್ಟಯ್ಯ, ಆರ್.ಪಿ. ವೆಂಕಟೇಶಮೂರ್ತಿ, ಪ್ರದೀಪ್,ನಿವೃತ್ತ ಅಧಿಕಾರಿ ಚಂದ್ರಯ್ಯ, ಡಾ. ಭಾರತಿ ರಾಜಶೇಖರ್, ನಮ್ಮೂರ ಸೇವೆ ರಾಜೇಗೌಡಹಾಜರಿದ್ದರು.