<p><strong>ಹಾಸನ: </strong>ಪೊಲೀಸ್ ಕಾನ್ಸ್ಟೆಬಲ್ ತರಬೇತಿ ಪಡೆದಿರುವ ಎಲ್ಲರಿಗೂ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಸ್ಪಂದನೆಇರಬೇಕು, ಇಲ್ಲದಿದ್ದರೆ ತರಬೇತಿ ವ್ಯರ್ಥವಾಗುತ್ತದೆ ಎಂದು ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕಪದಮ್ ಕುಮಾರ್ ಗರ್ಗ್ ಹೇಳಿದರು.</p>.<p>ತಾಲ್ಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 5ನೇ ತಂಡದ<br />ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು.</p>.<p>ಬಹುತೇಕರು ಈ ಹುದ್ದೆಗೂ ಮೀರಿದ ವಿದ್ಯಾರ್ಹತೆ ಇರುವವರು ಇದ್ದಾರೆ. ಇನ್ನೂ ಉನ್ನತ ಹುದ್ದೆಗೆ ಹೋಗುವ<br />ಕನಸು ಅನೇಕರಿಗೆ ಇರಬಹುದು. ಆ ರೀತಿ ಇದ್ದರೆ ವ್ಯಾಸಂಗ ಮುಂದುವರಿಸುವ ಮೂಲಕ ಉನ್ನತ ಹಂತ<br />ತಲುಪಬೇಕು. ಮನಸ್ಸಿನಲ್ಲಿ ತಮ್ಮ ಹುದ್ದೆಯ ಬಗ್ಗೆ ಸಕಾರಾತ್ಮಕ ಭಾವನೆ ಇರಬೇಕು ಎಂದು ನುಡಿದರು.</p>.<p>ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತು ಸಿಗುವ ಉದ್ಯೋಗವನ್ನು ಭಗವಂತ ಕರುಣಿಸಿದ್ದಾನೆ<br />ಎಂದು ಹೆಮ್ಮೆ ಪಡಬೇಕು. ಕೆಲವರಿಗೆ ಮಾತ್ರ ಒಲಿದು ಬರುವ ಈ ಅವಕಾಶದ ಸದುಪಯೋಗ<br />ಮಾಡಿಕೊಳ್ಳಬೇಕು ಎಂದರು.</p>.<p>ಜ್ಞಾನ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶ ಈ ಹುದ್ದೆಯಲ್ಲಿ ಸಿಗಲಿದ್ದು, ಸಿವಿಲ್ ವಿಭಾಗದವರು ಗುಪ್ತದಳ,<br />ಸಿಐಡಿ, ಸಿಬಿಐ ಡೆಪ್ಯೂಟೇಷನ್ ಪಡೆಯಲು ಅನೇಕ ಅವಕಾಶಗಳಿವೆ. ತರಬೇತಿ ಪೂರ್ಣಗೊಳಿಸಿರುವ ಎಲ್ಲರೂ<br />ತಮಗೆ ವಹಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.</p>.<p>145 ಪ್ರಶಿಕ್ಷಣಾರ್ಥಿಗಳಿಗೆ ಕಳೆದ ಎಂಟು ತಿಂಗಳಿಂದ ನೀಡಿದ ತರಬೇತಿ ಶುಕ್ರವಾರ ಕೊನೆಗೊಂಡಿದೆ.<br />ಪೊಲೀಸ್ ಇಲಾಖೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಗರ್ಗ್ ಅವರಿಗೆ ನೆನಪಿನ ಕಾಣಿಕೆ ನೀಡಿ<br />ಗೌರವಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು ಕಾರ್ಯಕ್ರಮ<br />ಕಣ್ತುಂಬಿಕೊಂಡರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ಗೌಡ, ಶಾಂತಿಗ್ರಾಮ ತರಬೇತಿ ಶಾಲೆ ಪ್ರಾಂಶುಪಾಲ ಎ.<br />ಮಾರುತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಪೊಲೀಸ್ ಕಾನ್ಸ್ಟೆಬಲ್ ತರಬೇತಿ ಪಡೆದಿರುವ ಎಲ್ಲರಿಗೂ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಸ್ಪಂದನೆಇರಬೇಕು, ಇಲ್ಲದಿದ್ದರೆ ತರಬೇತಿ ವ್ಯರ್ಥವಾಗುತ್ತದೆ ಎಂದು ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕಪದಮ್ ಕುಮಾರ್ ಗರ್ಗ್ ಹೇಳಿದರು.</p>.<p>ತಾಲ್ಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 5ನೇ ತಂಡದ<br />ನಾಗರಿಕ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದರು.</p>.<p>ಬಹುತೇಕರು ಈ ಹುದ್ದೆಗೂ ಮೀರಿದ ವಿದ್ಯಾರ್ಹತೆ ಇರುವವರು ಇದ್ದಾರೆ. ಇನ್ನೂ ಉನ್ನತ ಹುದ್ದೆಗೆ ಹೋಗುವ<br />ಕನಸು ಅನೇಕರಿಗೆ ಇರಬಹುದು. ಆ ರೀತಿ ಇದ್ದರೆ ವ್ಯಾಸಂಗ ಮುಂದುವರಿಸುವ ಮೂಲಕ ಉನ್ನತ ಹಂತ<br />ತಲುಪಬೇಕು. ಮನಸ್ಸಿನಲ್ಲಿ ತಮ್ಮ ಹುದ್ದೆಯ ಬಗ್ಗೆ ಸಕಾರಾತ್ಮಕ ಭಾವನೆ ಇರಬೇಕು ಎಂದು ನುಡಿದರು.</p>.<p>ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತು ಸಿಗುವ ಉದ್ಯೋಗವನ್ನು ಭಗವಂತ ಕರುಣಿಸಿದ್ದಾನೆ<br />ಎಂದು ಹೆಮ್ಮೆ ಪಡಬೇಕು. ಕೆಲವರಿಗೆ ಮಾತ್ರ ಒಲಿದು ಬರುವ ಈ ಅವಕಾಶದ ಸದುಪಯೋಗ<br />ಮಾಡಿಕೊಳ್ಳಬೇಕು ಎಂದರು.</p>.<p>ಜ್ಞಾನ ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶ ಈ ಹುದ್ದೆಯಲ್ಲಿ ಸಿಗಲಿದ್ದು, ಸಿವಿಲ್ ವಿಭಾಗದವರು ಗುಪ್ತದಳ,<br />ಸಿಐಡಿ, ಸಿಬಿಐ ಡೆಪ್ಯೂಟೇಷನ್ ಪಡೆಯಲು ಅನೇಕ ಅವಕಾಶಗಳಿವೆ. ತರಬೇತಿ ಪೂರ್ಣಗೊಳಿಸಿರುವ ಎಲ್ಲರೂ<br />ತಮಗೆ ವಹಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.</p>.<p>145 ಪ್ರಶಿಕ್ಷಣಾರ್ಥಿಗಳಿಗೆ ಕಳೆದ ಎಂಟು ತಿಂಗಳಿಂದ ನೀಡಿದ ತರಬೇತಿ ಶುಕ್ರವಾರ ಕೊನೆಗೊಂಡಿದೆ.<br />ಪೊಲೀಸ್ ಇಲಾಖೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಗರ್ಗ್ ಅವರಿಗೆ ನೆನಪಿನ ಕಾಣಿಕೆ ನೀಡಿ<br />ಗೌರವಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರಶಿಕ್ಷಣಾರ್ಥಿಗಳ ಪೋಷಕರು ಕಾರ್ಯಕ್ರಮ<br />ಕಣ್ತುಂಬಿಕೊಂಡರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ಗೌಡ, ಶಾಂತಿಗ್ರಾಮ ತರಬೇತಿ ಶಾಲೆ ಪ್ರಾಂಶುಪಾಲ ಎ.<br />ಮಾರುತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>