<p><strong>ಹಾಸನ</strong>: ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹ 20.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.</p>.<p>ಬಂಧಿತರ ಪೈಕಿ ಆರೋಪಿ ರೂಪರಾಜ ಎಂಬಾತ ಹೊರ ಜಿಲ್ಲೆ, ರಾಜ್ಯಗಳಲ್ಲಿ 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್, ಟ್ರೈಲರ್, ಲಾರಿ ಹಾಗೂ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಒಂದೂವರೆ ವರ್ಷದ ಹಿಂದೆ ಹಾಸನ ಹಾಗೂ ಬೈಂದೂರಿನಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಕಳ್ಳತನ ಮಾಡಿದ್ದ ಹಾಸನ ತಾಲ್ಲೂಕಿನ ಎಚ್. ಆಲದಹಳ್ಳಿ ಗ್ರಾಮದ ರೂಪೇಶ್ ಹಾಗೂ ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮದ ಗೌರೀಶ್ ನನ್ನು ಬಂಧಿಸಲಾಗಿದೆ. ಮಾ. 2 ರಂದು ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆಯಲ್ಲಿ<br />ವಾಹನಗಳ ತಪಾಸಣೆ ನಡೆಸುವ ವೇಳೆ ಟ್ರ್ಯಾಕ್ಟರ್ ನಂಬರ್ ಪ್ಲೇಟ್ ಉಜ್ಜಿರುವುದು ಕಂಡು ಬಂತು.</p>.<p>ವಿಚಾರಣೆ ನಡೆಸಿದಾಗ ಹಾಸನದ ಬೈಪಾಸ್ ರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮಾಡಿ ಮಾರಾಟ ಮಾಡಲು ತನ್ನ ಬಳಿಯೇ ಇಟ್ಟುಕೊಂಡಿದ್ದ. ನಂತರ ಬೈಂದೂರಿನಲ್ಲಿ ಕಳವು ಮಾಡಿದ್ದ ಲಾರಿಯನ್ನು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಮ್ಯಾನಾಯಕ ಅವಿಗೆ ಮಾರಾಟ ಮಾಡಿದ್ದಾನೆ. ಒಟ್ಟು ₹14ಲಕ್ಷ ಮೌಲ್ಯದ<br />ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ರೂಪರಾಜ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ಸಕಲೇಶಪುರ, ಬೆಂಗಳೂರು, ಹಾವೇರಿ ಸೇರಿದಂತೆ ವಿವಿಧ ರಾಜ್ಯಗಳ ಠಾಣೆಗಳಲ್ಲಿ ಈತ ವಿರುದ್ಧ 13 ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.</p>.<p>ಮನೆ ಕೆಲಸಗಾರರ ಬಂಧನ:<br />ತೋಟದ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸಗಾರರಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹುಲಿಗೆಪ್ಪ ವಡ್ಡರ್, ಧಾರವಾಡದ ಬಾಬು ಅವರನ್ನು ಬಂಧಿಸಲಾಗಿದೆ. ನೆಕ್ಲಸ್, 25 ಗ್ರಾಂ ಚಿನ್ನದ ಸರ, 6 ಗ್ರಾಂ ಉಂಗುರ, 4 ರೇಷ್ಮೆ ಸೀರೆ, ಬೈಕ್ ಸೇರಿ ಸೇರಿ ₹ 2.74 ಲಕ್ಷ ಮೌಲ್ಯದ ಆಭರಣ ಹಾಗೂ ನಗದು ವಶಕ್ಕೆ<br />ಪಡೆಯಲಾಗಿದೆ ಎಂದು ತಿಳಿಸಿದರು.</p>.<p>ಮನೆ ಮಾಲೀಕ ರಂಗಾಪುರ ಗ್ರಾಮದ ಶಿವಲಿಂಗಯ್ಯ ಅವರು ಫೆ. 23 ರಂದು ಕುಶಾಲನಗರದಲ್ಲಿ ಸಂಬಂಧಿಕರ ಮದುವೆಗೆ ಹೋಗುವಾಗಆರೋಪಿಗಳಾದ ರಘು, ಬಾಬುಗೆ ಮನೆ ಕಡೆ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು.<br />ನಂತರ ಇಬ್ಬರು ಸಂಚು ರೂಪಿಸಿ ಮನೆ ಬೀರುವಿನಲ್ಲಿದ್ದ ₹2.99 ಲಕ್ಷ ಮೌಲ್ಯದ ಆಭರಣಗಳು ಮತ್ತು ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.</p>.<p>ಮನೆಯಲ್ಲಿ ಕಳ್ಳತನ:<br />ಹೊಳೆನರಸೀಪುರ ತಾಲ್ಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದ ಮನೆಯೊಂದರ ಬೀಗ ಮುರಿದು ₹31 ಸಾವಿರ ನಗದು ಹಾಗೂ 5 ಗ್ರಾಂ ಚಿನ್ನದ ಓಲೆ ಕಳವು ಮಾಡಿದ್ದ ಅದೇ ಗ್ರಾಮದ ದೊರೆರಾಜ (27) ನನ್ನು ಬಂಧಿಸಲಾಗಿದೆ.<br />ಕೂಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮಮ್ಮ ಅವರ ಮನೆಗೆ ನುಗ್ಗಿ ಕಳವು ಮಾಡಿ, ತನ್ನ ಜಮೀನಿನ ಹುಲ್ಲಿನ ಗುಡ್ಡೆಯಲ್ಲಿ ಬಚ್ಚಿಟ್ಟಿದ್ದ ₹ 51 ಸಾವಿರ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.</p>.<p>ಆರೋಪಿ ಪತ್ತೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಬಿ.ಬಿ. ಲಕ್ಷ್ಮೇಗೌಡ, ಆರ್.ಪಿ. ಅಶೋಕ್, ವಿನಯ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹ 20.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.</p>.<p>ಬಂಧಿತರ ಪೈಕಿ ಆರೋಪಿ ರೂಪರಾಜ ಎಂಬಾತ ಹೊರ ಜಿಲ್ಲೆ, ರಾಜ್ಯಗಳಲ್ಲಿ 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ವಶಪಡಿಸಿಕೊಂಡಿರುವ ಟ್ರ್ಯಾಕ್ಟರ್, ಟ್ರೈಲರ್, ಲಾರಿ ಹಾಗೂ ಚಿನ್ನಾಭರಣವನ್ನು ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಒಂದೂವರೆ ವರ್ಷದ ಹಿಂದೆ ಹಾಸನ ಹಾಗೂ ಬೈಂದೂರಿನಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಕಳ್ಳತನ ಮಾಡಿದ್ದ ಹಾಸನ ತಾಲ್ಲೂಕಿನ ಎಚ್. ಆಲದಹಳ್ಳಿ ಗ್ರಾಮದ ರೂಪೇಶ್ ಹಾಗೂ ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿ ಕುಂದೂರು ಗ್ರಾಮದ ಗೌರೀಶ್ ನನ್ನು ಬಂಧಿಸಲಾಗಿದೆ. ಮಾ. 2 ರಂದು ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆಯಲ್ಲಿ<br />ವಾಹನಗಳ ತಪಾಸಣೆ ನಡೆಸುವ ವೇಳೆ ಟ್ರ್ಯಾಕ್ಟರ್ ನಂಬರ್ ಪ್ಲೇಟ್ ಉಜ್ಜಿರುವುದು ಕಂಡು ಬಂತು.</p>.<p>ವಿಚಾರಣೆ ನಡೆಸಿದಾಗ ಹಾಸನದ ಬೈಪಾಸ್ ರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನ ಮಾಡಿ ಮಾರಾಟ ಮಾಡಲು ತನ್ನ ಬಳಿಯೇ ಇಟ್ಟುಕೊಂಡಿದ್ದ. ನಂತರ ಬೈಂದೂರಿನಲ್ಲಿ ಕಳವು ಮಾಡಿದ್ದ ಲಾರಿಯನ್ನು ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಮ್ಯಾನಾಯಕ ಅವಿಗೆ ಮಾರಾಟ ಮಾಡಿದ್ದಾನೆ. ಒಟ್ಟು ₹14ಲಕ್ಷ ಮೌಲ್ಯದ<br />ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ರೂಪರಾಜ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದು, ಸಕಲೇಶಪುರ, ಬೆಂಗಳೂರು, ಹಾವೇರಿ ಸೇರಿದಂತೆ ವಿವಿಧ ರಾಜ್ಯಗಳ ಠಾಣೆಗಳಲ್ಲಿ ಈತ ವಿರುದ್ಧ 13 ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.</p>.<p>ಮನೆ ಕೆಲಸಗಾರರ ಬಂಧನ:<br />ತೋಟದ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸಗಾರರಾದ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹುಲಿಗೆಪ್ಪ ವಡ್ಡರ್, ಧಾರವಾಡದ ಬಾಬು ಅವರನ್ನು ಬಂಧಿಸಲಾಗಿದೆ. ನೆಕ್ಲಸ್, 25 ಗ್ರಾಂ ಚಿನ್ನದ ಸರ, 6 ಗ್ರಾಂ ಉಂಗುರ, 4 ರೇಷ್ಮೆ ಸೀರೆ, ಬೈಕ್ ಸೇರಿ ಸೇರಿ ₹ 2.74 ಲಕ್ಷ ಮೌಲ್ಯದ ಆಭರಣ ಹಾಗೂ ನಗದು ವಶಕ್ಕೆ<br />ಪಡೆಯಲಾಗಿದೆ ಎಂದು ತಿಳಿಸಿದರು.</p>.<p>ಮನೆ ಮಾಲೀಕ ರಂಗಾಪುರ ಗ್ರಾಮದ ಶಿವಲಿಂಗಯ್ಯ ಅವರು ಫೆ. 23 ರಂದು ಕುಶಾಲನಗರದಲ್ಲಿ ಸಂಬಂಧಿಕರ ಮದುವೆಗೆ ಹೋಗುವಾಗಆರೋಪಿಗಳಾದ ರಘು, ಬಾಬುಗೆ ಮನೆ ಕಡೆ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು.<br />ನಂತರ ಇಬ್ಬರು ಸಂಚು ರೂಪಿಸಿ ಮನೆ ಬೀರುವಿನಲ್ಲಿದ್ದ ₹2.99 ಲಕ್ಷ ಮೌಲ್ಯದ ಆಭರಣಗಳು ಮತ್ತು ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.</p>.<p>ಮನೆಯಲ್ಲಿ ಕಳ್ಳತನ:<br />ಹೊಳೆನರಸೀಪುರ ತಾಲ್ಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದ ಮನೆಯೊಂದರ ಬೀಗ ಮುರಿದು ₹31 ಸಾವಿರ ನಗದು ಹಾಗೂ 5 ಗ್ರಾಂ ಚಿನ್ನದ ಓಲೆ ಕಳವು ಮಾಡಿದ್ದ ಅದೇ ಗ್ರಾಮದ ದೊರೆರಾಜ (27) ನನ್ನು ಬಂಧಿಸಲಾಗಿದೆ.<br />ಕೂಲಿ ಕೆಲಸ ಮಾಡಿಕೊಂಡಿರುವ ಲಕ್ಷ್ಮಮ್ಮ ಅವರ ಮನೆಗೆ ನುಗ್ಗಿ ಕಳವು ಮಾಡಿ, ತನ್ನ ಜಮೀನಿನ ಹುಲ್ಲಿನ ಗುಡ್ಡೆಯಲ್ಲಿ ಬಚ್ಚಿಟ್ಟಿದ್ದ ₹ 51 ಸಾವಿರ ಮೌಲ್ಯದ ಚಿನ್ನ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.</p>.<p>ಆರೋಪಿ ಪತ್ತೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಹೊಳೆನರಸೀಪುರ ಡಿವೈಎಸ್ಪಿ ಬಿ.ಬಿ. ಲಕ್ಷ್ಮೇಗೌಡ, ಆರ್.ಪಿ. ಅಶೋಕ್, ವಿನಯ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>