ಹಾಸನ: ‘ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮಾಡುವ ಪಾಪದ ಕೆಲಸಕ್ಕೆ ನೀವು ಹೊಣೆಗಾರರಾಗಬೇಡಿ. ನಿಮ್ಮ ಪಾಪಗಳನ್ನು ಇನ್ನಾದರೂ ತೊಳೆದುಕೊಳ್ಳಿ. ಇಷ್ಟೆಲ್ಲಾ ಹೇಳಿದರೂ ಅರ್ಥ ಮಾಡಿಕೊಳ್ಳದಿದ್ದರೆ ದೇವರು ಕ್ಷಮಿಸಲ್ಲ. ಪಿಡಿಒಗಳು ರಾಕ್ಷಸರು’ ಎಂದು ವಸತಿ ಸಚಿವ ವಿ.ಸೋಮಣ್ಣ ಹರಿಹಾಯ್ದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
‘ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳಿದ್ದೇ ಶಾಸನವಲ್ಲ. ಏನ್ ಮಾಡ್ತಿರೋ ಗೊತ್ತಿಲ್ಲ. ನನಗೆ ರಿಸಲ್ಟ್ ಬೇಕು. ಬಡವರ ಹೊಟ್ಟೆ ಉರಿಸಬೇಡಿ’ ಎಂದರು.