ಮಣ್ಣಿನಡಿ ಹೂತಿದ್ದ ತೆಂಗಿನಕಾಯಿಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರ ಸುತ್ತಿ, ಕುಂಕುಮ ಹಚ್ಚಲಾಗಿದೆ. ತೆಂಗಿನಕಾಯಿ ಮೊಳಕೆ ಒಡೆದು ಚಿಗುರುತ್ತಿತ್ತು. ನೌಕರರು ಸಸಿಗೆ ಪ್ರತಿದಿನ ನೀರು ಹಾಕುತ್ತಿದ್ದರು. ಚಿಗುರು ತೆಂಗಿನ ಗರಿಯಂತೆ ಕಾಣುತ್ತಿದೆ ಎಂದು ಸ್ಥಳೀಯರು ಅಂದಾಜಿಸಿ ಕುತೂಹಲದಿಂದ ಮಣ್ಣಿನಿಂದ ತೆಗೆದಾಗ ಪೂಜೆ ಮಾಡಿ, ದಾರ ಸುತ್ತಿದ ತೆಂಗಿನಕಾಯಿ ದೊರಕಿದೆ.