ಜೈನ ಮುನಿ ಪುಣ್ಯಸಾಗರ ಮಹಾರಾಜ ಮಾತನಾಡಿ, ‘ಅನಾದಿಕಾಲದಿಂದಲೂ ಜಿನಧರ್ಮ ಇದೆ. ಧರ್ಮ ಇರುವುದರಿಂದಲೇ ಇಂದು ಸಾಧು, ಸಂತರು, ಮುನಿಗಳುವಿಹಾರ ಮಾಡುತ್ತಿದ್ದಾರೆ. ಯಾವುದೇ ಧರ್ಮ ಮತ್ತು ಜಾತಿ ಭೇದ ಇಲ್ಲದೆ ಎಲ್ಲರಿಗೂ ಉಪದೇಶಮಾಡಲಾಗುವುದು. ಪಂಚಕಲ್ಯಾಣ ಮಹೋತ್ಸವಕ್ಕಾಗಿಯೇ 300 ಕಿ.ಮೀ ಕಾಲ್ನಡಿಗೆಯಲ್ಲಿ ಬಂದಿದ್ದೇನೆ’ ಎಂದರು.