<p><strong>ಬೇಲೂರು/ಉಡುಪಿ: </strong>ಬೇಲೂರು ತಾಲ್ಲೂಕಿನ ಕೋಗಿಲೆಮನೆಗ್ರಾಮ ಪಂಚಾಯಿತಿಯ ಸದಸ್ಯ ಎಂ.ಎಂ.ಶಿವಕುಮಾರ್ ಅವರ ಅಪಹರಣ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ.</p>.<p>ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಅಪಹರಣ ನಡೆದಿತ್ತು.</p>.<p>‘ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿಸಿ ಕೊಂಡಿರುವನಾಲ್ವರ ಪತ್ತೆಗಾಗಿಬಲೆ ಬೀಸಲಾಗಿದೆ’ ಎಂದು ಕೊಲ್ಲೂರು ಠಾಣಾ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಘಟನೆಯ ಹಿನ್ನೆಲೆ:</strong></p>.<p>ಕೋಗಿಲೆಮನೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 8 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, 8 ಸದಸ್ಯರಲ್ಲಿ ತಲಾ ನಾಲ್ಕುಮಂದಿ ಎರಡು ಗುಂಪುಗಳಾಗಿದೆ.ತಮ್ಮ ಗುಂಪಿಗೆ ಅಧ್ಯಕ್ಷ ಸ್ಥಾನಒಲಿಸಿಕೊಳ್ಳುವ ಆಕಾಂಕ್ಷೆಯಿಂದ ಒಂದು ತಂಡ ಸಾಮಾನ್ಯ ವರ್ಗದಸಾವಿತ್ರಿ ಪರವಾಗಿ, ಮತ್ತೊಂದು ತಂಡ ಹೇಮಾವತಿ ಪರವಾಗಿ ನಿಂತಿದೆ.</p>.<p>ಇವರಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೇಮಾವತಿ ಅವರು ಗ್ರಾಮದಲ್ಲೇ ಉಳಿದು, ಬೆಂಬಲಿತ ಸದಸ್ಯರಾದ ಎಂ.ಎಂ.ಶಿವಕುಮಾರ್, ಶೇಷಪ್ಪ, ಎಚ್.ಎಸ್.ಶಿವವೀರಸಂಗಪ್ಪ ಹಾಗೂ ಹೇಮಾವತಿ ಅವರ ಪತಿ ಸಿ.ಸಿ.ರಘು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಇನೋವಾ ಕಾರಿನಲ್ಲಿ ಫೆ.2 ರಂದು ತೆರಳಿದ್ದಾರೆ.</p>.<p>ಪ್ರವಾಸದ ಮಾಹಿತಿ ಪಡೆದಮತ್ತೊಂದು ಗುಂಪಿನ ಬೆಂಬಲಿಗರು ಎನ್ನಲಾದ ಕೆಲವರು,ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಅರಣ್ಯವೊಂದರ ಸಮೀಪ ಸದಸ್ಯರಿದ್ದ ಕಾರನ್ನು ಅಡ್ಡಗಟ್ಟಿ, ಬಲವಂತದಿಂದ ಶಿವಕುಮಾರ್ ಅವರನ್ನು ಅಪಹರಿಸಿದ್ದಾರೆ.</p>.<p>ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿತ್ತು.</p>.<p>ಈ ಕೃತ್ಯಕ್ಕೆ ಕಾರಣರಾದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗುರುವಾರ ನಡೆಯಬೇಕಿದ್ದಚುನಾವಣೆಯನ್ನು ಮುಂದೂಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಸದಸ್ಯರ ಹಾಜರಾತಿ ಆಧರಿಸಿ ಆಯ್ಕೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.</p>.<p><strong>ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ</strong></p>.<p><strong>ಹಾಸನ:</strong> ತಾಲ್ಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿದ್ದ ಮಹಿಳಾ ಅಭ್ಯರ್ಥಿಯನ್ನು ಅಪಹರಿಸಲಾಗಿದೆ.</p>.<p>ಬುಧವಾರ ಚುನಾವಣೆ ನಿಗದಿಯಾಗಿತ್ತು.ಬಿಸಿಎಂ (ಎ) ಮೀಸಲಾತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರು.</p>.<p>‘ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾರೇಕೆರೆ ಗ್ರಾಮದ ವೆಂಕಟೇಶ, ಸ್ವಾಮಿ, ಮಡೇನೂರು ಗ್ರಾಮದ ಸುರೇಂದ್ರ ಎಂಬುವವರು ನಮ್ಮ ತಾಯಿಯನ್ನು ಅಪಹರಿಸಿದ್ದಾರೆ’ ಎಂದು ಪುತ್ರ ಜಯರಾಂ, ಶಾಂತಿ ಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<p>ಆಯ್ಕೆ: ನಿಗದಿಯಂತೆ ಚುನಾವಣೆ ನಡೆದಿದ್ದು ಮುದ್ದನಹಳ್ಳಿ ಗ್ರಾಮದ ಸರಸ್ವತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು/ಉಡುಪಿ: </strong>ಬೇಲೂರು ತಾಲ್ಲೂಕಿನ ಕೋಗಿಲೆಮನೆಗ್ರಾಮ ಪಂಚಾಯಿತಿಯ ಸದಸ್ಯ ಎಂ.ಎಂ.ಶಿವಕುಮಾರ್ ಅವರ ಅಪಹರಣ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ.</p>.<p>ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ ಈ ಅಪಹರಣ ನಡೆದಿತ್ತು.</p>.<p>‘ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿಸಿ ಕೊಂಡಿರುವನಾಲ್ವರ ಪತ್ತೆಗಾಗಿಬಲೆ ಬೀಸಲಾಗಿದೆ’ ಎಂದು ಕೊಲ್ಲೂರು ಠಾಣಾ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p><strong>ಘಟನೆಯ ಹಿನ್ನೆಲೆ:</strong></p>.<p>ಕೋಗಿಲೆಮನೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 8 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಆದರೆ, 8 ಸದಸ್ಯರಲ್ಲಿ ತಲಾ ನಾಲ್ಕುಮಂದಿ ಎರಡು ಗುಂಪುಗಳಾಗಿದೆ.ತಮ್ಮ ಗುಂಪಿಗೆ ಅಧ್ಯಕ್ಷ ಸ್ಥಾನಒಲಿಸಿಕೊಳ್ಳುವ ಆಕಾಂಕ್ಷೆಯಿಂದ ಒಂದು ತಂಡ ಸಾಮಾನ್ಯ ವರ್ಗದಸಾವಿತ್ರಿ ಪರವಾಗಿ, ಮತ್ತೊಂದು ತಂಡ ಹೇಮಾವತಿ ಪರವಾಗಿ ನಿಂತಿದೆ.</p>.<p>ಇವರಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೇಮಾವತಿ ಅವರು ಗ್ರಾಮದಲ್ಲೇ ಉಳಿದು, ಬೆಂಬಲಿತ ಸದಸ್ಯರಾದ ಎಂ.ಎಂ.ಶಿವಕುಮಾರ್, ಶೇಷಪ್ಪ, ಎಚ್.ಎಸ್.ಶಿವವೀರಸಂಗಪ್ಪ ಹಾಗೂ ಹೇಮಾವತಿ ಅವರ ಪತಿ ಸಿ.ಸಿ.ರಘು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಇನೋವಾ ಕಾರಿನಲ್ಲಿ ಫೆ.2 ರಂದು ತೆರಳಿದ್ದಾರೆ.</p>.<p>ಪ್ರವಾಸದ ಮಾಹಿತಿ ಪಡೆದಮತ್ತೊಂದು ಗುಂಪಿನ ಬೆಂಬಲಿಗರು ಎನ್ನಲಾದ ಕೆಲವರು,ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಅರಣ್ಯವೊಂದರ ಸಮೀಪ ಸದಸ್ಯರಿದ್ದ ಕಾರನ್ನು ಅಡ್ಡಗಟ್ಟಿ, ಬಲವಂತದಿಂದ ಶಿವಕುಮಾರ್ ಅವರನ್ನು ಅಪಹರಿಸಿದ್ದಾರೆ.</p>.<p>ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿತ್ತು.</p>.<p>ಈ ಕೃತ್ಯಕ್ಕೆ ಕಾರಣರಾದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗುರುವಾರ ನಡೆಯಬೇಕಿದ್ದಚುನಾವಣೆಯನ್ನು ಮುಂದೂಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಸದಸ್ಯರ ಹಾಜರಾತಿ ಆಧರಿಸಿ ಆಯ್ಕೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.</p>.<p><strong>ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ</strong></p>.<p><strong>ಹಾಸನ:</strong> ತಾಲ್ಲೂಕಿನ ಮಡೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿದ್ದ ಮಹಿಳಾ ಅಭ್ಯರ್ಥಿಯನ್ನು ಅಪಹರಿಸಲಾಗಿದೆ.</p>.<p>ಬುಧವಾರ ಚುನಾವಣೆ ನಿಗದಿಯಾಗಿತ್ತು.ಬಿಸಿಎಂ (ಎ) ಮೀಸಲಾತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರು.</p>.<p>‘ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾರೇಕೆರೆ ಗ್ರಾಮದ ವೆಂಕಟೇಶ, ಸ್ವಾಮಿ, ಮಡೇನೂರು ಗ್ರಾಮದ ಸುರೇಂದ್ರ ಎಂಬುವವರು ನಮ್ಮ ತಾಯಿಯನ್ನು ಅಪಹರಿಸಿದ್ದಾರೆ’ ಎಂದು ಪುತ್ರ ಜಯರಾಂ, ಶಾಂತಿ ಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.</p>.<p>ಆಯ್ಕೆ: ನಿಗದಿಯಂತೆ ಚುನಾವಣೆ ನಡೆದಿದ್ದು ಮುದ್ದನಹಳ್ಳಿ ಗ್ರಾಮದ ಸರಸ್ವತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>