‘ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಯಿತು. ಲಾಕ್ಡೌನ್ ಇದ್ದ ಕಾರಣ ಹೋಟೆಲ್ಗಳು ಬಂದ್ ಆಗಿದ್ದವು. ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ಡಾ.ಸೌಮ್ಯಾಮಣಿ ತಮ್ಮ ಮನೆಯಿಂದಲೇ ಊಟದ ವ್ಯವಸ್ಥೆ ಮಾಡಿದರು. ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಮಾಡಿಸುತ್ತಿದ್ದೇವು. ಹಾಗಾಗಿ ಅಲ್ಲಿನ ವೈದ್ಯರ ಸಲಹೆ ಪಡೆಯುವಂತೆ ಹೇಳಿದ್ದಾರೆ. ಆಗಾಗ್ಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಾರೆ. ಪ್ರಸ್ತುತ ಬೇಲೂರು ತಾಲ್ಲೂಕಿನ ಬಳ್ಳೂರಿನಲ್ಲಿ ವಾಸ್ತವ್ಯ ಇದ್ದು, ಆರಾಮವಾಗಿ ಇದ್ದಾರೆ’ ಎಂದು ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್ ಹೇಳಿದರು.