‘ನಮ್ಮ ಅಗನಿ ಗ್ರಾಮವೂ ಸಹ ಸೇರ್ಪಡೆಯಾಗಿದೆ. ಆದರೆ, ಇಡೀ ಗ್ರಾಮ ಸೂಕ್ಷ್ಮ ವಲಯಕ್ಕೆ ಸೇರುವುದಿಲ್ಲ. ಗ್ರಾಮದ ದಾಖಲೆಯಲ್ಲಿ ರಕ್ಷಿತ ಅರಣ್ಯ ಇದ್ದು, ಅದು ಮಾತ್ರ ಸೇರ್ಪಡೆ ಆಗುತ್ತದೆ. ವರದಿಯಲ್ಲಿ ಬೃಹತ್ ಕೈಗಾರಿಕೆಗಳನ್ನಾಗಲಿ, ಥರ್ಮಲ್ ಫ್ಲಾಂಟ್ ನಿರ್ಮಾಣ ಮಾಡಬಾರದು. 20 ಸಾವಿರ ಚದರ ಅಡಿ ಕಟ್ಟಡ ಕಟ್ಟಬಾರದು ಎಂದಿದೆ. ಪಶ್ಚಿಮಘಟ್ಟದಲ್ಲಿ ಯಾರು ಇದನ್ನೆಲ್ಲಾ ಮಾಡುತ್ತಾರೆ. ರಾಸಾಯನಿಕ ಗೊಬ್ಬರ ಬಳಸುವುದನ್ನು ನಿರ್ಬಂಧಿಸಿರುವುದು ಆರಂಭದಲ್ಲಿ ನಮಗೆ ತೊಂದರೆ ಆಗಬಹುದು. ಆದರೆ, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವೇ ಆಗಿದೆ. ಸರಿಯಾದ ಮಾಹಿತಿ ಇಲ್ಲದೆ, ಗ್ರಾ.ಪಂ. ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿಕೆ ನೀಡುವುದು, ಪ್ರತಿಭಟನೆ ಮಾಡುವುದು ಸರಿಯಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.