ಬಿ.ಎಸ್.ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷಬಿ.ವೈ.ವಿಜಯೇಂದ್ರ ಅವರ ನೇತೃತ್ವದ ತಂಡದ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದರು.ಕೆ.ಆರ್.ಪೇಟೆ, ಶಿರಾ ಹಾಗೂ ಮಸ್ಕಿ ಉಪ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಹೊಣೆ ಹೊತ್ತಿದ್ದ ತಂಡದಲ್ಲಿ ಪ್ರೀತಂ ಅವರ ಬದ್ಧತೆ ನಾಯಕರ ಗಮನ ಸೆಳೆದಿತ್ತು. ಹಾಸನ ಕ್ಷೇತ್ರದಿಂದ ನೂರಾರುಕಾರ್ಯಕರ್ತರನ್ನು ಕರೆದೊಯ್ದು ಪ್ರಚಾರದಲ್ಲಿ ತೊಡಗಿಸುವುದರ ಜತೆಗೆ, ಪ್ರಚಾರ ತಂತ್ರರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.