ಗ್ರಾಸಿಂ ಯುನಿಟ್ ಹೆಡ್ ಅಜಯಕುಮಾರ್ ಗುಪ್ತ ಮಾತನಾಡಿ, ತಾಯಿ ಭುವನೇಶ್ವರಿ ದೇವಿಯ ತೇರು ನಿರ್ಮಿಸಲಾಗಿದ್ದು, ಮೊದಲನೇ ಸಾಲಿನಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಎರಡನೇ ಸಾಲಿನಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಶಿವಕುಮಾರ ಸ್ವಾಮೀಜಿ, ಸಂತ ಶಿಶುನಾಳ ಶರೀಫ, ಸಿದ್ಧಾರೂಢರ ಭಾವಚಿತ್ರ, ಮೂರನೇ ಸಾಲಿನಲ್ಲಿ ವರನಟ ರಾಜಕುಮಾರ, ಸರ್.ಎಂ.ವಿಶ್ವೇಶ್ವರಯ್ಯ, ಅನಿಲ್ ಕುಂಬ್ಳೆ, ಫರ್ಡಿನೆಂಡ್ ಕಿಟೆಲ್, ಮೈಸೂರಿನ ಒಡೆಯರು, ಡಿ.ವಿ. ಗುಂಡಪ್ಪ ಹಾಗೂ ಪ್ರಕಾಶ್ ಪಡುಕೋಣೆಯವರ ಭಾವಚಿತ್ರಗಳು ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸಿದವು ಎಂದು ವಿವರಿಸಿದರು