ರಕ್ಷಣೆಗೆ ಮೊರೆ:‘ಮಠದ ಮೂಲ ಗುರುಗಳಾದ ರಾಜಗುರು ಬ್ರಹ್ಮಾನಂದೇಶ ಯೋಗಿರಾಜೇಂದ್ರ ಸ್ವಾಮೀಜಿ ಅವರು 2011ರ ಮೇ 11ರಂದು ನನ್ನನ್ನು ‘ಉತ್ತರಾಧಿಕಾರಿ’ ಎಂದು ನೋಂದಣಿ ಮಾಡಿದ್ದಾರೆ. ಹೀಗಾಗಿ ಮಠದ ಆಸ್ತಿ ಸಂಪೂರ್ಣ ನನ್ನ ಹೆಸರಿನಲ್ಲಿದ್ದು, ಹೈಕೋರ್ಟ್ ಆದೇಶದಂತೆ ಹಸ್ತಾಂತರವಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಮಠದ ಆಡಳಿತ ಸುವ್ಯವಸ್ಥೆಯಿಂದ ನಡೆಸಿಕೊಂಡು ಹೋಗುತ್ತೇನೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿವೆ. ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು’ ಎಂದು ಗಂಗಿಭಾವಿಮಠದ ರಾಜಗುರು ಶಿವಯೋಗಿ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.