ಮಾಜಿ ಸಚಿವ ಬಸವರಾಜ್ ಶಿವಣ್ಣನವರ ಮಾತನಾಡಿ, ಕ್ಷೇತ್ರದ ತುಂಬ ಒಂದು ಸುತ್ತು ಹಾಕಿ ಬಂದರೆ ಶ್ರೀನಿವಾಸ್ ಮಾನೆ ಜನಪ್ರಿಯತೆ ಅರಿವಿಗೆ ಬರಲಿದೆ. ಬಿಜೆಪಿ ನಾಯಕರು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಜನ ಶ್ರೀನಿವಾಸ್ ಮಾನೆ ಅವರ ಬಗೆಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಅವರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ. ಜನ ಈಗಾಗಲೇ ನಿರ್ಣಯ ಕೈಗೊಂಡಿದ್ದು, ಮಾನೆ ಗೆಲ್ಲಲಿದ್ದಾರೆ ಎಂದರು.