ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದಿಮೆ ಪರವಾನಗಿ: ಸ್ಥಳದಲ್ಲೇ ಶುಲ್ಕ ವಸೂಲಿ

ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ
Last Updated 25 ನವೆಂಬರ್ 2021, 15:56 IST
ಅಕ್ಷರ ಗಾತ್ರ

ಹಾವೇರಿ: ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ಅಧಿಕಾರಿಗಳೊಂದಿಗೆ ನಗರದಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದರು.

ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ವಿವಿಧ ಅಂಗಡಿಗಳ ಮಾಲೀಕರು ಉದ್ದಿಮೆ ಪರವಾನಗಿ (ಟ್ರೇಡ್‌ ಲೈಸೆನ್ಸ್‌) ಪಡೆಯದೇ ಅಥವಾ ನವಿಕರೀಸದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಯಿತು.ಸ್ಥಳದಲ್ಲಿಯೇ ಉದ್ದಿಮೆ ಪರವಾನಗಿ ರಸೀದಿ ಹರಿಸಿ, ಹಣ ವಸೂಲಿ ಮಾಡಲಾಯಿತು.

ನಗರಸಬೆಯ ಪಕ್ಕದಲ್ಲಿನ ಅಂಗಡಿ, ಬೇಕರಿಗೆ ಭೇಟಿ ನೀಡುವ ಮೂಲಕ ಉದ್ದಿಮೆ ಪರವಾನಗಿ ಪರಿಶೀಲಿಸಿದ ಅಧ್ಯಕ್ಷ ನೀರಲಗಿ ಹಾಗೂ ಪೌರಾಯುಕ್ತ ಚಲವಾದಿ ಅವರು ರಸೀದಿ ನೀಡಿ ಹಣ ಪಡೆದರು.

ಅಲ್ಲಿಂದ ನಗರದ ಗಾಂಧಿವೃತ್ತ, ಜೆ.ಪಿ. ವೃತ್ತ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಉದ್ದಿಮೆ ಪರವಾನಗಿ ನೀಡುವ ಮೂಲಕ ನಗರಸಭೆಗೆ ಬರಬೇಕಾದ ಬಾಕಿ ವಸೂಲಿಗೆ ಕ್ರಮ ಜರುಗಿಸಿದರು.

ರಸ್ತೆ ದುರಸ್ತಿಗೆ ಅನುದಾನ ಕೋರಿಕೆ

ಸತತ ಮಳೆಯಿಂದಾಗಿ ಹಾವೇರಿ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಜನರ ಸಂಚಾರಕ್ಕೆ ತೀವ್ರ ಧಕ್ಕೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಲುನಗರಸಭೆಯಲ್ಲಿ ಅನುದಾನದ ಕೊರತೆ ಇರುವುದರಿಂದ, ಎಸ್‌ಡಿಆರ್‌ಎಫ್‌ನಿಂದ ₹2 ಕೋಟಿ ವಿಶೇಷ ಅನುದಾನವನ್ನು ಕೊಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT