<p><strong>ಹಾವೇರಿ:</strong> ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ನಗರಕ್ಕೆ ಭೇಟಿ ನೀಡಿದ್ದು, ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಬೆಳಿಗ್ಗೆಯೇ ಭೇಟಿ ನೀಡಿದರು.</p><p>ರೈತರಿಂದ ಸೊಪ್ಪು ಹಾಗೂ ತರಕಾರಿ ಖರೀದಿಸುವ ವ್ಯಾಪಾರಿಗಳನ್ನು ವೀರಪ್ಪ ಅವರು ಮಾತನಾಡಿಸಿದರು.</p><p>ಶೌಚಾಲಯ ಹಾಗೂ ಮೂಲ ಸೌಕರ್ಯ ಇಲ್ಲದಿದ್ದಕ್ಕೆ ಗರಂ ಆದ ವೀರಪ್ಪ, 'ಕೋಟಿಗಟ್ಟಲೇ ಆದಾಯ ಸಂಗ್ರಹ ಆಗುತ್ತದೆ. ನೀವು ಏಕೆ ಸೌಕರ್ಯ ಕಲ್ಪಿಸಲ್ಲ' ಎಂದು ತರಾಟೆಗೆ ತೆಗೆದುಕೊಂಡರು.</p><p>'ನನಗೆ ತಪ್ಪು ಮಾಹಿತಿ ನೀಡಬೇಡಿ. ಯಾಮಾರಿಸಬೇಡಿ' ಎಂದೂ ಗರಂ ಆದರು.</p><p>ತೂಕದ ಯಂತ್ರ ಪರಿಶೀಲನೆ ನಡೆಸಿದ ವೀರಪ್ಪ, ಅದರಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದರು.</p><p>ತೂಕದ ಯಂತ್ರದ ಎರಡು ಫಲಕಗಲ್ಲಿ ಒಂದು ಕಡೆ 80 ಕೆ.ಜಿ ಹಾಗೂ ಇನ್ನೊಂದು ಕಡೆ 60 ಕೆ.ಜಿ ಪ್ರಮಾಣ ತೋರಿಸುತ್ತಿತ್ತು. ತೂಕದ ಯಂತ್ರವನ್ನು ಪ್ರಮಾಣೀಕರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೂಕದಲ್ಲಿ ಮೋಸ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p><p>'ತೂಕದಲ್ಲಿ ರೈತರಿಗೆ ಮೋಸ ಮಾಡಬೇಡಿ' ಎಂದು ವೀರಪ್ಪ ಅವರು ವ್ಯಾಪಾರಿಗಳಿಗೆ ಹೇಳಿದರು.</p><p>ಮಾರುಕಟ್ಟೆಯಲ್ಲಿ ವಹಿವಾಟಿನ ದಾಖಲೆಗಳನ್ನು ಸಂಗ್ರಹಿಸಿದರು. ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ವೀರಪ್ಪ, 'ಮಾರುಕಟ್ಟೆಯಲ್ಲಿ ಎಷ್ಟು ಆದಾಯ ಸಂಗ್ರಹವಾಗಿದೆ' ಎಂದು ಎಪಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.</p><p>'ವಾರ್ಷಿಕ ₹ 3 ಕೋಟಿ ಆದಾಯ ಸಂಗ್ರಹವಾಗುತ್ತದೆ' ಎಂದು ಅಧಿಕಾರಿಗಳು ಹೇಳಿದರು.</p><p>'ಅಷ್ಟು ಆದಾಯ ಬಂದರೂ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಏಕಿಲ್ಲ. ರೈತರು, ವ್ಯಾಪಾರಿಗಳು, ಖರೀದಿದಾರರ ವಿಶ್ರಾಂತಿಗೆ ಮೂಲ ಸೌಕರ್ಯ ಕಲ್ಪಿಸಿ' ಎಂದು ವೀರಪ್ಪ ಹೇಳಿದರು.</p><p>ಉಪ ಲೋಕಾಯುಕ್ತ ವೀರಪ್ಪ ಅವರು ಫೆ. 12ರಿಂದ 14ರವರೆಗೆ ಜಿಲ್ಲೆಯಲ್ಲಿ ಇರಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ನಗರಕ್ಕೆ ಭೇಟಿ ನೀಡಿದ್ದು, ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಬೆಳಿಗ್ಗೆಯೇ ಭೇಟಿ ನೀಡಿದರು.</p><p>ರೈತರಿಂದ ಸೊಪ್ಪು ಹಾಗೂ ತರಕಾರಿ ಖರೀದಿಸುವ ವ್ಯಾಪಾರಿಗಳನ್ನು ವೀರಪ್ಪ ಅವರು ಮಾತನಾಡಿಸಿದರು.</p><p>ಶೌಚಾಲಯ ಹಾಗೂ ಮೂಲ ಸೌಕರ್ಯ ಇಲ್ಲದಿದ್ದಕ್ಕೆ ಗರಂ ಆದ ವೀರಪ್ಪ, 'ಕೋಟಿಗಟ್ಟಲೇ ಆದಾಯ ಸಂಗ್ರಹ ಆಗುತ್ತದೆ. ನೀವು ಏಕೆ ಸೌಕರ್ಯ ಕಲ್ಪಿಸಲ್ಲ' ಎಂದು ತರಾಟೆಗೆ ತೆಗೆದುಕೊಂಡರು.</p><p>'ನನಗೆ ತಪ್ಪು ಮಾಹಿತಿ ನೀಡಬೇಡಿ. ಯಾಮಾರಿಸಬೇಡಿ' ಎಂದೂ ಗರಂ ಆದರು.</p><p>ತೂಕದ ಯಂತ್ರ ಪರಿಶೀಲನೆ ನಡೆಸಿದ ವೀರಪ್ಪ, ಅದರಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದರು.</p><p>ತೂಕದ ಯಂತ್ರದ ಎರಡು ಫಲಕಗಲ್ಲಿ ಒಂದು ಕಡೆ 80 ಕೆ.ಜಿ ಹಾಗೂ ಇನ್ನೊಂದು ಕಡೆ 60 ಕೆ.ಜಿ ಪ್ರಮಾಣ ತೋರಿಸುತ್ತಿತ್ತು. ತೂಕದ ಯಂತ್ರವನ್ನು ಪ್ರಮಾಣೀಕರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೂಕದಲ್ಲಿ ಮೋಸ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p><p>'ತೂಕದಲ್ಲಿ ರೈತರಿಗೆ ಮೋಸ ಮಾಡಬೇಡಿ' ಎಂದು ವೀರಪ್ಪ ಅವರು ವ್ಯಾಪಾರಿಗಳಿಗೆ ಹೇಳಿದರು.</p><p>ಮಾರುಕಟ್ಟೆಯಲ್ಲಿ ವಹಿವಾಟಿನ ದಾಖಲೆಗಳನ್ನು ಸಂಗ್ರಹಿಸಿದರು. ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ವೀರಪ್ಪ, 'ಮಾರುಕಟ್ಟೆಯಲ್ಲಿ ಎಷ್ಟು ಆದಾಯ ಸಂಗ್ರಹವಾಗಿದೆ' ಎಂದು ಎಪಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.</p><p>'ವಾರ್ಷಿಕ ₹ 3 ಕೋಟಿ ಆದಾಯ ಸಂಗ್ರಹವಾಗುತ್ತದೆ' ಎಂದು ಅಧಿಕಾರಿಗಳು ಹೇಳಿದರು.</p><p>'ಅಷ್ಟು ಆದಾಯ ಬಂದರೂ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಏಕಿಲ್ಲ. ರೈತರು, ವ್ಯಾಪಾರಿಗಳು, ಖರೀದಿದಾರರ ವಿಶ್ರಾಂತಿಗೆ ಮೂಲ ಸೌಕರ್ಯ ಕಲ್ಪಿಸಿ' ಎಂದು ವೀರಪ್ಪ ಹೇಳಿದರು.</p><p>ಉಪ ಲೋಕಾಯುಕ್ತ ವೀರಪ್ಪ ಅವರು ಫೆ. 12ರಿಂದ 14ರವರೆಗೆ ಜಿಲ್ಲೆಯಲ್ಲಿ ಇರಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>