‘ಅನ್ನಭಾಗ್ಯ’ ಯೋಜನೆ ಜಾರಿ ಮಾಡಿದ ನಂತರವೇ ಜನ ಅಕ್ಕಿ ನೋಡಿದ್ದಾರೆ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. 1947ರಿಂದಲೂ ಪಡಿತರದಲ್ಲಿ ಅಕ್ಕಿ ಸಿಗುತ್ತಿದೆ. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ₹29 ಹಾಗೂ ರಾಜ್ಯ ಸರ್ಕಾರದ ಪಾಲು ₹3 ರೂಪಾಯಿ ಮಾತ್ರ. ನರೇಂದ್ರ ಮೋದಿ ಫೋಟೊ ಬಳಸದೆ, ಸಿದ್ದರಾಮಯ್ಯ ಅವರು ತಮ್ಮ ಫೋಟೊ ಮಾತ್ರ ಹಾಕಿಕೊಂಡು ಮೆರೆಯುತ್ತಾರೆ ಎಂದು ಕುಟುಕಿದರು.