ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಣಣದ ಕೆಂಡದಮಠದಚಿನ್ನಯ್ಯಸ್ವಾಮಿ ಅವರ 58ನೇ ಪುಣ್ಯಸ್ಮರಣೋತ್ಸವ ಮತ್ತು ರೇವಣ ಸಿದ್ಧೇಶ್ವರ ಶ್ರೀಗಳ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸಿ ಚಾಲನೆ ನೀಡಿದರು.
ಮಠದ ವತಿಯಿಂದ "ಮೈಲಾರಿ"ಎಂಬ ಕುರಿಮರಿಯನ್ನು ಬೊಮ್ಮಾಯಿ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.
ಕೆಂಡದ ಮಠದ ಶ್ರೀ ಬಸವಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾದನ ಹಿಪ್ಪರಗಿ ಗುರುಶಾಂತವಿರೇಶ್ವರ ಹಿರೇಮಠದ ಶಾಂತವೀರೇಶ್ವರ ಶಿವಾಚಾರ್ಯ ಶ್ರೀಗಳು ಇತರರು ಭಾಗವಹಿಸಿದ್ದರು.