ನಗರಕ್ಕೆ ಸೋಮವಾರ ಭೇಟಿ ನೀಡಿದ ಡಿಜಿಪಿ ಪ್ರವೀಣ್ ಸೂದ್ ಅವರು, ಕೆರಿಮತ್ತಿಹಳ್ಳಿಯಲ್ಲಿ ಜಲಾವೃತವಾಗಿರುವ ಹಳೆಯ ಎಸ್ಪಿ ಕಚೇರಿ ಕಟ್ಟಡ ಹಾಗೂ ನಗರದ ಡಿಎಆರ್ ಕಟ್ಟಡವನ್ನು ವೀಕ್ಷಿಸಿದರು. ನಂತರ ಎಂ.ಜಿ.ರಸ್ತೆಯಲ್ಲಿರುವ ಎಸ್ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಳೆಯಲ್ಲೇ ಹೊಸ ಎಸ್ಪಿ ಕಚೇರಿ ನಿರ್ಮಿಸಲಿರುವ ಜಾಗವನ್ನು ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು.