<p><strong>ಹಾವೇರಿ</strong>: ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕೆ.ಎಸ್.ಆರ್.ಟಿ.ಸಿ., ಅಂಚೆ ಕಚೇರಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪತ್ರಿಕಾ ಕಾರ್ಯಾಲಯ ಉದ್ಯೋಗಿಗಳು ಹಾಗೂ ವೈದ್ಯರು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 95 ಜನರಿಗೆ ಕೋವಿಡ್-19 ದೃಢಪಟ್ಟಿದೆ. 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 1,764 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 953 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಶನಿವಾರದ ಎರಡು ಸಾವು ಸೇರಿ ಒಟ್ಟಾರೆ 35 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 776 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.</p>.<p>ಶನಿವಾರ ದೃಢಗೊಂಡ ಪ್ರಕರಣಗಳಲ್ಲಿಸವಣೂರು-1, ಶಿಗ್ಗಾವಿ– 3, ರಾಣೆಬೆನ್ನೂರು-23, ಹಾವೇರಿ-38, ಬ್ಯಾಡಗಿ-9, ಹಾನಗಲ್-5, ಹಿರೇಕೆರೂರು-16 ಮಂದಿಗೆ ಸೋಂಕು ದೃಢಪಟ್ಟಿದೆ. ಸವಣೂರು-5, ರಾಣೆಬೆನ್ನೂರು-19, ಹಾವೇರಿ-10, ಬ್ಯಾಡಗಿ-3, ಹಿರೇಕೆರೂರು ತಾಲ್ಲೂಕಿನ 3 ಮಂದಿ ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಮರಣದ ವಿವರ:</strong>ರಾಣೆಬೆನ್ನೂರ ನಗರದ 54 ವರ್ಷದ ಪುರುಷ (ಪಿ-160322) ಹಾಗೂ 51 ವರ್ಷದ ಪುರುಷ (ಪಿ-136214 ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 54 ವರ್ಷದ ಪುರುಷ ಆಗಸ್ಟ್ 6ರಂದು ಮೃತಪಟ್ಟಿರುತ್ತಾರೆ 51 ವರ್ಷದ ಪುರುಷ ಆಗಸ್ಟ್ 7ರಂದು ಮೃತಪಟ್ಟಿರುತ್ತಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.</p>.<p class="Subhead"><strong>ಸೋಂಕಿತರ ವಿವರ:</strong>ರಾಣೇಬೆನ್ನೂರ ನಗರದ ವಿವಿಧ ಬಡಾವಣೆಯ -15, ಕುರುಬಗೇರಿಯ -2, ಅಸುಂಡಿ-2, ಚಿಕ್ಕಳ್ಳಳ್ಳಿ, ಕಣವಿಸಿದ್ದನಗೇರಿ, ಇಟಗಿ, ಗುಡ್ಡದ ಆನ್ವೇರಿಯ, ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.ಹಾವೇರಿ ನಗರದ-21, ಹಾವನೂರ-11, ಗುತ್ತಲ-2, ಕಳ್ಳಿಹಾಳ, ಗುಡಸಾಲನಕೊಪ್ಪ, ಬೆಳವಿಗಿ, ದೇವಿಹೊಸೂರ ತಲಾ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.</p>.<p>ಬ್ಯಾಡಗಿ ಪಟ್ಟಣದ-6, ಅಂದಾನಿಕೊಪ್ಪ, ಚಿನ್ನಿಕಟ್ಟಿ ಹಾಗೂ ಮಾಸಣಗಿ ತಲಾ ಒಬ್ಬರಿಗೆ ಹಾಗೂ ಸವಣೂರ ಪಟ್ಟಣದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹಿರೇಕೆರೂರು 4, ಹಿರೇಮಾದಾಪುರ-4, ಬನ್ನಿಹಟ್ಟಿ-2, ಹಂಸಭಾವಿ, ರಟ್ಟೀಹಳ್ಳಿ, ತಿಪ್ಪಾಯಿಕೊಪ್ಪ, ಕಂಡೇಬಾಗೂರ, ಮಾಸೂರ, ಚಿಕ್ಕಯಡಚಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.</p>.<p>ಶಿಗ್ಗಾವಿ, ಹಿರೇಮಲ್ಲಾಪುರ ಹಾಗೂ ಬೆಳಗಲಿ ತಲಾ ಒಬ್ಬರಿಗೆ ಹಾಗೂ ಹಾನಗಲ್-2, ಕಾಮನಹಳ್ಳಿ, ಅಕ್ಕಿಆಲೂರು, ಅರೇಲಕಮಾಪೂರಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.</p>.<p>ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ಕೆ.ಎಸ್.ಆರ್.ಟಿ.ಸಿ., ಅಂಚೆ ಕಚೇರಿ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಪತ್ರಿಕಾ ಕಾರ್ಯಾಲಯ ಉದ್ಯೋಗಿಗಳು ಹಾಗೂ ವೈದ್ಯರು ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ 95 ಜನರಿಗೆ ಕೋವಿಡ್-19 ದೃಢಪಟ್ಟಿದೆ. 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 1,764 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 953 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಶನಿವಾರದ ಎರಡು ಸಾವು ಸೇರಿ ಒಟ್ಟಾರೆ 35 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 776 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.</p>.<p>ಶನಿವಾರ ದೃಢಗೊಂಡ ಪ್ರಕರಣಗಳಲ್ಲಿಸವಣೂರು-1, ಶಿಗ್ಗಾವಿ– 3, ರಾಣೆಬೆನ್ನೂರು-23, ಹಾವೇರಿ-38, ಬ್ಯಾಡಗಿ-9, ಹಾನಗಲ್-5, ಹಿರೇಕೆರೂರು-16 ಮಂದಿಗೆ ಸೋಂಕು ದೃಢಪಟ್ಟಿದೆ. ಸವಣೂರು-5, ರಾಣೆಬೆನ್ನೂರು-19, ಹಾವೇರಿ-10, ಬ್ಯಾಡಗಿ-3, ಹಿರೇಕೆರೂರು ತಾಲ್ಲೂಕಿನ 3 ಮಂದಿ ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಮರಣದ ವಿವರ:</strong>ರಾಣೆಬೆನ್ನೂರ ನಗರದ 54 ವರ್ಷದ ಪುರುಷ (ಪಿ-160322) ಹಾಗೂ 51 ವರ್ಷದ ಪುರುಷ (ಪಿ-136214 ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 54 ವರ್ಷದ ಪುರುಷ ಆಗಸ್ಟ್ 6ರಂದು ಮೃತಪಟ್ಟಿರುತ್ತಾರೆ 51 ವರ್ಷದ ಪುರುಷ ಆಗಸ್ಟ್ 7ರಂದು ಮೃತಪಟ್ಟಿರುತ್ತಾರೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.</p>.<p class="Subhead"><strong>ಸೋಂಕಿತರ ವಿವರ:</strong>ರಾಣೇಬೆನ್ನೂರ ನಗರದ ವಿವಿಧ ಬಡಾವಣೆಯ -15, ಕುರುಬಗೇರಿಯ -2, ಅಸುಂಡಿ-2, ಚಿಕ್ಕಳ್ಳಳ್ಳಿ, ಕಣವಿಸಿದ್ದನಗೇರಿ, ಇಟಗಿ, ಗುಡ್ಡದ ಆನ್ವೇರಿಯ, ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.ಹಾವೇರಿ ನಗರದ-21, ಹಾವನೂರ-11, ಗುತ್ತಲ-2, ಕಳ್ಳಿಹಾಳ, ಗುಡಸಾಲನಕೊಪ್ಪ, ಬೆಳವಿಗಿ, ದೇವಿಹೊಸೂರ ತಲಾ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ.</p>.<p>ಬ್ಯಾಡಗಿ ಪಟ್ಟಣದ-6, ಅಂದಾನಿಕೊಪ್ಪ, ಚಿನ್ನಿಕಟ್ಟಿ ಹಾಗೂ ಮಾಸಣಗಿ ತಲಾ ಒಬ್ಬರಿಗೆ ಹಾಗೂ ಸವಣೂರ ಪಟ್ಟಣದ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹಿರೇಕೆರೂರು 4, ಹಿರೇಮಾದಾಪುರ-4, ಬನ್ನಿಹಟ್ಟಿ-2, ಹಂಸಭಾವಿ, ರಟ್ಟೀಹಳ್ಳಿ, ತಿಪ್ಪಾಯಿಕೊಪ್ಪ, ಕಂಡೇಬಾಗೂರ, ಮಾಸೂರ, ಚಿಕ್ಕಯಡಚಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.</p>.<p>ಶಿಗ್ಗಾವಿ, ಹಿರೇಮಲ್ಲಾಪುರ ಹಾಗೂ ಬೆಳಗಲಿ ತಲಾ ಒಬ್ಬರಿಗೆ ಹಾಗೂ ಹಾನಗಲ್-2, ಕಾಮನಹಳ್ಳಿ, ಅಕ್ಕಿಆಲೂರು, ಅರೇಲಕಮಾಪೂರಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.</p>.<p>ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>