ಹರಿಹರದ ಗ್ರಾಸಿಂ ಕಂಪನಿ ನಿತ್ಯ 30 ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಯಾವುದೇ ಕೊರತೆಯಾಗಲಾರದು. ಪ್ರತ್ಯೇಕವಾಗಿ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುವ ಸೊಂಕಿತರಿಗೆ ಅಗತ್ಯ ಔಷಧ ಹೊಂದಿರುವ ಕಿಟ್ ನೀಡಲಾಗುವುದೆಂದು ಅವರು ಹೇಳಿದರು. ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಸಿ ಅವರು ಇ.ಸಿ.ಜಿ ಕಿಟ್ಗಳನ್ನು ವೈದ್ಯರಿಗೆ ಹಸ್ತಾಂತರಿಸಿದರು. ತಹಶೀಲ್ದಾರ್ ಶರಣಮ್ಮಾ ಕಾರಿ, ಡಿಎಚ್ಒ ಡಾ.ರಾಜೇಂದ್ರ ದೊಡ್ಡಮನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಾ ಖಾರ್ವಿ, ಡಾ. ವಿರೇಶ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುರೇಶ ಯತ್ನಳ್ಳಿ, ವಿರೇಂದ್ರ ಶೆಟ್ಟರ,
ಶಶಿಕಲಾ ಪೂಜಾರ ಇದ್ದರು.