ಗ್ರಾಮದ ನಿವಾಸಿ ತರುಣ್ ವಿರೂಪಾಕ್ಷಪ್ಪ ಪೂಜಾರ (10) ಗಾಯಗೊಂಡ ಬಾಲಕ. ಬಾಲಕನಿಗೆ ತಕ್ಷಣ ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ತೊಡೆಯಲ್ಲಿ ಸೇರಿಕೊಂಡಿದ್ದ ಕೊಂಬೆಯನ್ನು ಹೊರ ತೆಗೆಯಲಾಗಿದೆ. ನಂತರ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ, ಶನಿವಾರ ಬೆಳಿಗ್ಗೆ ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯಲಾಗಿದೆ.