ಶಿಗ್ಗಾವಿ: ‘ಸನಾತನ ಧರ್ಮವು ಹಿಂದು ಸಮುದಾಯದವರಿಗೆ ಮಾರ್ಗದರ್ಶಿಯಾಗಿದ್ದು, ಅಂತಹ ಧರ್ಮವನ್ನು ಕಡೆಗಣಿಸಿದವರು ನಾಶವಾಗಿ ಹೋಗುತ್ತಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲ್ಲೂಕಿನ ಬಿಸನಳ್ಳಿ ಗ್ರಾಮದ ಪಂಚಾಚಾರ್ಯ ವೇದ, ಆಗಮನ, ಸಂಗೀತ ಪಾಠ ಶಾಲೆ ಆವರಣದಲ್ಲಿ ಸೋಮವಾರ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆ, ಸಿದ್ಧಾಂತ ಶಿಖಾಮಣಿ ಪಾರಾಯಣ, ಶಿವದೀಕ್ಷಾ ಅಯ್ಯಾಚಾರ, ಉಚಿತ ಸಾಮೂಹಿಕ ವಿವಾಹ, ಪಾಠಶಾಲೆ ದಶಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮ ಎಂದಿಗೂ, ಯಾರಿಂದಲೂ ನಾಶವಾಗಲು ಸಾಧ್ಯವಿಲ್ಲ. ಆದರೆ ಕೆಲವರು ಇತಿಹಾಸ ತಿಳಿಯದೇ ಸನಾತನ ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ. ಸನಾತ ಧರ್ಮವೆಂದರೆ ಉನ್ನತ, ಮೌಲ್ಯಾಧಾರಿತ ಬದುಕು ನಡೆಸುವ ಪದ್ಧತಿ. ಹೀಗಾಗಿ ಕೇಂದ್ರ ಸರ್ಕಾರ ಸಾಂಸ್ಕೃತಿಕ ಪುನರುತ್ಥಾನ, ರಾಮ ಮಂದಿರ ನಿರ್ಮಾಣ ಮಾಡುತ್ತಿದೆ ಎಂದರು.