‘ಮಾರ್ಚ್ 21ರಂದು ರೈತ ಮಹಾ ಪಂಚಾಯತ್ ನಡೆದಿದೆ. ಎರಡು ದಿನ ಬಿಟ್ಟು (ಮಾರ್ಚ್ 23) ಎಫ್ಐಆರ್ ಹಾಕುತ್ತಾರೆ ಅಂದರೆ, ಇದು ಉದ್ದೇಶಪೂರ್ವಕ ಅಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಶಿವಮೊಗ್ಗ ಮತ್ತು ಹಾವೇರಿ ಎರಡೂ ಕಡೆ ರಾಜ್ಯ ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣ ಹಾಕುವಂತೆ ಮಾಡಿದೆ. ಇಂಥ ತಂತ್ರಗಳಿಂದ ರೈತರ ಹೋರಾಟ ಮಣಿಸಲು ಸಾಧ್ಯವಿಲ್ಲ. ಮಾರ್ಚ್ 26ರಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ಜಿಲ್ಲಾ ರೈತ ಮುಖಂಡರಾದಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ತಿಳಿಸಿದ್ದಾರೆ.