ಇದೇ ವೇಳೆ ಜಮೀನಿನ ಅಕ್ಕ ಪಕ್ಕದಲ್ಲಿದ್ದ ರೈತರಾದ ಮಂಜುನಾಥ ನಂಜಪ್ಪನವರ, ಚಂದ್ರು ಗಾಣಿಗೇರ, ಚನ್ನಪ್ಪ ಬಾಳಿಕಾಯಿ, ಪದ್ಮರಾಜ ದ್ಯಾಮಾಪುರ, ಪರಸಪ್ಪ ತಿಮ್ಮಾಪುರ, ಮಲ್ಲೇಶ ಬಾಳಿಕಾಯಿ, ನಿಂಗಪ್ಪ ಹಡಪದ, ಭರತೇಶ ಹಳ್ಳಿಯವರ ಮತ್ತು ಗ್ರಾಮಸ್ಥರು ಬೆಂಕಿಯನ್ನು ಆರಿಸಲು ಹರಸಾಹಸಪಟ್ಟರು. ಈ ಕುರಿತು ತಡಸ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.