<p><strong>ತಡಸ</strong>: ಸಮೀಪದ ಗಂಗಿಭಾವಿಯ ಉಮಾ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಯೋಗಿರಾಜೇಂದ್ರ ಸ್ವಾಮೀಜಿ–ಗುರುಶಿದ್ದೇಶ್ವರ ಸ್ಳಾಮೀಜಿ ಸ್ಮರಣೋತ್ಸವವು ಜ. 15ರಂದು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಥೋತ್ಸವವೂ ಜರುಗಲಿದೆ.</p>.<p>ಜಾಹ್ನವಿ ಋಷಿಗಳು ತಪಸ್ಸು ಮಾಡಿದ ಸ್ಥಳ ಇದಾಗಿದೆ. ಋಷಿಗಳು ನಿತ್ಯವೂ ವಾಯು ವೇಗದಿಂದ ಕಾಶಿಗೆ ಹೋಗಿ ಅಲ್ಲಿಂದ ಗಂಗಾಜಲ ತಂದು ಗಂಗಿಭಾವಿಯಲ್ಲಿ ಹೂವು ಹರಿದುಕೊಂಡು ರಾಮೇಶ್ವರದ ರಾಮ ಅಂಗ ದೇವರಿಗೆ ಪೂಜೆ ಮಾಡುತ್ತಿದ್ದರು. ಈ ಪುಣ್ಯ ಕ್ಷೇತ್ರದಲ್ಲಿ ಉತ್ತರಾಯಣ ಪರ್ವಕಾಲ ಮಕರ ಸಂಕ್ರಮಣದಂದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.</p>.<p>ಗಂಗಿಭಾವಿಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಈ ವರ್ಷ ಜಾತ್ರೆ ನಡೆಯಲಿದೆ.</p>.<p>ಜ. 15ರಂದು ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕವಿದೆ. ಯೋಗಿರಾಜೇಂದ್ರ ಸ್ವಾಮೀಜಿ ಹಾಗೂ ಗವಿಸಿದ್ದೇಶ್ವರ ಗದ್ದುಗೆಗೆ ಪೂಜೆ ನಡೆಯಲಿದೆ. ಮಹಾರುದ್ರಭಿಷೇಕವನ್ನು ಬಸಯ್ಯ ನೆಲ್ಲೂರಮಠ ನೆರವೇರಿಸಲಿದ್ದಾರೆ.</p>.<p>ಮಧ್ಯಾಹ್ನ 1ಗಂಟೆಗೆ ರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಹೊಸೂರ ಗ್ರಾಮದ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗಿಭಾವಿವರೆಗೆ ಜರುಗಲಿದೆ. ಮಧ್ಯಾಹ್ನ 4 ಗಂಟೆಗೆ ರಾಮಲಿಂಗೇಶ್ವರ ರಥೋತ್ಸವವಿದೆ.</p>.<p>ಜ. 16ರಂದು ಪಂಚಾಮೃತ ಅಭಿಷೇಕವಿದೆ. ಸಂಜೆ 4 ಗಂಟೆಗೆ ರಾಮಲಿಂಗೇಶ್ವರ ದೇವರ ತೇರಿಗೆ ಕಡುಬಿನ ಕಾಳಗ ಜರುಗಲಿದೆ.</p>.<p>‘ಧಾರ್ಮಿಕ ಪವಿತ್ರ ಸ್ಥಳವಾದ ಗಂಗಿಭಾವಿಯಲ್ಲಿ ಈ ವರ್ಷವೂ ಸಂಭ್ರಮದಿಂದ ಜಾತ್ರೆ ನಡೆಯಲಿದೆ. ಭಕ್ತರು ಆಗಮಿಸಿ ದೇವರು ಹಾಗೂ ಯೋಗ ರಾಜೇಂದ್ರ ಸ್ವಾಮೀಜಿ ಕೃಪೆಗೆ ಪಾತ್ರರಾಗಬೇಕು’ ಎಂದು ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು ತಿಳಿಸಿದರು.</p>.<p>ಬಂಜಾರ ಸಮುದಾಯದ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ಲಮಾಣಿ, ‘ಗಂಗಿಭಾವಿ ಕ್ಷೇತ್ರವು ಜನರ ರೋಗ ರೋಜಿನಗಳನ್ನು ತೊಳೆದು ಹಾಕುವ ಶಕ್ತಿ ಹೊಂದಿದೆ. ಇಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಪಾವನರಾಗುತ್ತಾರೆಂಬ ನಂಬಿಕೆಯಿದೆ. ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಡಸ</strong>: ಸಮೀಪದ ಗಂಗಿಭಾವಿಯ ಉಮಾ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಯೋಗಿರಾಜೇಂದ್ರ ಸ್ವಾಮೀಜಿ–ಗುರುಶಿದ್ದೇಶ್ವರ ಸ್ಳಾಮೀಜಿ ಸ್ಮರಣೋತ್ಸವವು ಜ. 15ರಂದು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಥೋತ್ಸವವೂ ಜರುಗಲಿದೆ.</p>.<p>ಜಾಹ್ನವಿ ಋಷಿಗಳು ತಪಸ್ಸು ಮಾಡಿದ ಸ್ಥಳ ಇದಾಗಿದೆ. ಋಷಿಗಳು ನಿತ್ಯವೂ ವಾಯು ವೇಗದಿಂದ ಕಾಶಿಗೆ ಹೋಗಿ ಅಲ್ಲಿಂದ ಗಂಗಾಜಲ ತಂದು ಗಂಗಿಭಾವಿಯಲ್ಲಿ ಹೂವು ಹರಿದುಕೊಂಡು ರಾಮೇಶ್ವರದ ರಾಮ ಅಂಗ ದೇವರಿಗೆ ಪೂಜೆ ಮಾಡುತ್ತಿದ್ದರು. ಈ ಪುಣ್ಯ ಕ್ಷೇತ್ರದಲ್ಲಿ ಉತ್ತರಾಯಣ ಪರ್ವಕಾಲ ಮಕರ ಸಂಕ್ರಮಣದಂದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.</p>.<p>ಗಂಗಿಭಾವಿಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಈ ವರ್ಷ ಜಾತ್ರೆ ನಡೆಯಲಿದೆ.</p>.<p>ಜ. 15ರಂದು ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕವಿದೆ. ಯೋಗಿರಾಜೇಂದ್ರ ಸ್ವಾಮೀಜಿ ಹಾಗೂ ಗವಿಸಿದ್ದೇಶ್ವರ ಗದ್ದುಗೆಗೆ ಪೂಜೆ ನಡೆಯಲಿದೆ. ಮಹಾರುದ್ರಭಿಷೇಕವನ್ನು ಬಸಯ್ಯ ನೆಲ್ಲೂರಮಠ ನೆರವೇರಿಸಲಿದ್ದಾರೆ.</p>.<p>ಮಧ್ಯಾಹ್ನ 1ಗಂಟೆಗೆ ರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಹೊಸೂರ ಗ್ರಾಮದ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗಿಭಾವಿವರೆಗೆ ಜರುಗಲಿದೆ. ಮಧ್ಯಾಹ್ನ 4 ಗಂಟೆಗೆ ರಾಮಲಿಂಗೇಶ್ವರ ರಥೋತ್ಸವವಿದೆ.</p>.<p>ಜ. 16ರಂದು ಪಂಚಾಮೃತ ಅಭಿಷೇಕವಿದೆ. ಸಂಜೆ 4 ಗಂಟೆಗೆ ರಾಮಲಿಂಗೇಶ್ವರ ದೇವರ ತೇರಿಗೆ ಕಡುಬಿನ ಕಾಳಗ ಜರುಗಲಿದೆ.</p>.<p>‘ಧಾರ್ಮಿಕ ಪವಿತ್ರ ಸ್ಥಳವಾದ ಗಂಗಿಭಾವಿಯಲ್ಲಿ ಈ ವರ್ಷವೂ ಸಂಭ್ರಮದಿಂದ ಜಾತ್ರೆ ನಡೆಯಲಿದೆ. ಭಕ್ತರು ಆಗಮಿಸಿ ದೇವರು ಹಾಗೂ ಯೋಗ ರಾಜೇಂದ್ರ ಸ್ವಾಮೀಜಿ ಕೃಪೆಗೆ ಪಾತ್ರರಾಗಬೇಕು’ ಎಂದು ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರು ತಿಳಿಸಿದರು.</p>.<p>ಬಂಜಾರ ಸಮುದಾಯದ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ ಲಮಾಣಿ, ‘ಗಂಗಿಭಾವಿ ಕ್ಷೇತ್ರವು ಜನರ ರೋಗ ರೋಜಿನಗಳನ್ನು ತೊಳೆದು ಹಾಕುವ ಶಕ್ತಿ ಹೊಂದಿದೆ. ಇಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಪಾವನರಾಗುತ್ತಾರೆಂಬ ನಂಬಿಕೆಯಿದೆ. ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>